alex Certify SHOCKING: ನೂಪುರ್ ಶರ್ಮಾ ಶಿರಚ್ಛೇದ ಮಾಡಿದವರಿಗೆ ಮನೆ, ಆಸ್ತಿ ನೀಡುವುದಾಗಿ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ನೂಪುರ್ ಶರ್ಮಾ ಶಿರಚ್ಛೇದ ಮಾಡಿದವರಿಗೆ ಮನೆ, ಆಸ್ತಿ ನೀಡುವುದಾಗಿ ಘೋಷಣೆ

ನವದೆಹಲಿ: ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ತಲೆ ಕಡಿದವರಿಗೆ ನನ್ನ ಮನೆ, ಆಸ್ತಿ ನೀಡುವುದಾಗಿ ಅಜ್ಮೀರ್ ದರ್ಗಾದ ಖಾದಿಮ್ ಸೈಯದ್ ಸಲ್ಮಾನ್ ಚಿಸ್ತಿ ಘೋಷಿಸಿದ್ದಾರೆ.

ಅಜ್ಮೀರ್ ದರ್ಗಾದ ಖಾದಿಮ್ ಸೈಯದ್ ಸಲ್ಮಾನ್ ಚಿಸ್ತಿ ಅವರು ಈ ರೀತಿ ಘೋಷಣೆ ಮಾಡಿದ್ದು, ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡುವ ಯಾರಿಗಾದರೂ ತಮ್ಮ ಮನೆ ಮತ್ತು ಆಸ್ತಿಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

ಪ್ರವಾದಿ ಕುರಿತಾಗಿ ನೂಪುರ್ ಶರ್ಮಾ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಅವರನ್ನು ಕೊಲ್ಲುವಂತೆ ವಿಡಿಯೋದಲ್ಲಿ ಸೈಯದ್ ಸಲ್ಮಾನ್ ಚಿಸ್ತಿ ಮನವಿ ಮಾಡಿದ್ದಾರೆ. ನೂಪುರ್‌ ನಂತಹ ವ್ಯಕ್ತಿಗಳಿಗೆ ಬದುಕುವ ಹಕ್ಕಿಲ್ಲ. ಅವಳ ತಲೆಯನ್ನು ತಂದವರಿಗೆ ತಮ್ಮ ಮನೆ ಮತ್ತು ಜಮೀನು ಆಸ್ತಿಯನ್ನು ನೀಡುವುದಾಗಿ ಹೇಳಿದ್ದಾರೆ.

ವಿಡಿಯೋ ವೈರಲ್ ಆದ ಬಳಿಕ ಅಜ್ಮೀರ್ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮಂಗಳವಾರ ಬೆಳಗ್ಗೆ ಆತನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸಲ್ಮಾನ್ ಚಿಸ್ತಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಎಎಸ್‌ಪಿ) ವಿಕಾಸ್ ಸಾಂಗ್ವಾನ್, ಆರೋಪಿ ಸಲ್ಮಾನ್ ದರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಪೊಲೀಸರು ಸಲ್ಮಾನ್‌ ಗಾಗಿ ಹುಡುಕುತ್ತಿದ್ದಾರೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು. ಅವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...