alex Certify ಕರಡಿಯನ್ನೇ ಕೊಂದು ತಿಂದ 6 ಮಂದಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರಡಿಯನ್ನೇ ಕೊಂದು ತಿಂದ 6 ಮಂದಿ ಅರೆಸ್ಟ್

ತುಮಕೂರು: ಕೊರಟಗೆರೆ ಸಮೀಪದ ಗೌಜಗಲ್ಲು ಗ್ರಾಮದಲ್ಲಿ ಕರಡಿಯನ್ನು ಕೊಂದು ತಿಂದ ಮತ್ತು ಕೃತ್ಯಕೆಕ ಸಹಕಾರ ನೀಡಿದ ಆರು ಮಂದಿಯನ್ನು ಬಂಧಿಸಲಾಗಿದೆ.

ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯ, ಯತೀಶ, ನಾಗರಾಜ, ಶ್ರೀಧರ್, ರಾಮಯ್ಯ ಮತ್ತು ರಾಜಣ್ಣ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಕರಡಿಯನ್ನು ಬೇಟೆಯಾಡಿ ತಿಂದು ಉಳಿದ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಮತ್ತು ಇದಕ್ಕೆ ಸಹಕರಿಸಿದ ಆರೋಪದ ಮೇಲೆ ಈ ಆರು ಮಂದಿಯನ್ನು ಬಂಧಿಸಲಾಗಿದೆ.

ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಚಿಕ್ಕಬಸಯ್ಯನ ಮನೆಯ ಮೇಲೆ ದಾಳಿ ಮಾಡಿದಾಗ ಕರಡಿ ಮಾಂಸ ಪತ್ತೆಯಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ, ಜಮೀನಿನ ಬಂಡೆಯ ಮೇಲೆ ಕರಡಿಯನ್ನು ಕೊಂದು ಮಾಂಸಕ್ಕಾಗಿ ಬೇರ್ಪಡಿಸಿರುವುದು ಗೊತ್ತಾಗಿದೆ. ಕರಡಿಯ ಮುಂಗಾಲು, ನಾಲಗೆ, ಬಾಲ, ಕೂದಲು, ಉಗುರು, ಕತ್ತರಿಸಲು ಬಳಸಿದ ಮಚ್ಚು ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...