alex Certify ಮನೆಗೆ ತೆರಳದೇ ಕಚೇರಿಯಲ್ಲೇ ಇರುವಂತೆ BDA ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ: ಮೂವರು ಬ್ರೋಕರ್ ಗಳು ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ತೆರಳದೇ ಕಚೇರಿಯಲ್ಲೇ ಇರುವಂತೆ BDA ಅಧಿಕಾರಿಗಳು, ಸಿಬ್ಬಂದಿಗೆ ಸೂಚನೆ: ಮೂವರು ಬ್ರೋಕರ್ ಗಳು ವಶಕ್ಕೆ

ಬೆಂಗಳೂರು: ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ನಿಮ್ಮ ನಿಮ್ಮ ಸೆಕ್ಷನ್ ಗಳಲ್ಲಿ ಇರಿ ಎಂದು ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಸೂಚನೆ ನೀಡಿದ್ದಾರೆ. ಪ್ರತಿ ಸೆಕ್ಷನ್ ನಲ್ಲಿ ತಪಾಸಣೆ ನಡೆಯುವವರೆಗೆ ಇಲ್ಲೇ ಇರಬೇಕು ಎಂದು ಬಿಡಿಎ ಕಚೇರಿ ಸಿಬ್ಬಂದಿಗೆ ಲೋಕಾಯುಕ್ತ ಪೊಲೀಸರು ಸೂಚಿಸಿದ್ದಾರೆ.

ಬಿಡಿಎ ಕಚೇರಿಯಲ್ಲಿ ಮೂವರು ಬ್ರೋಕರ್ ಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಬಿಡಿಎ ಕಛೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ತಾವು ನೊಂದವರು ಎಂದು ಬ್ರೋಕರ್ ಗಳು ಪೋಸ್ ಕೊಟ್ಟಿದ್ದರು. ತಮ್ಮ ಬಳಿ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕತೆ ಕಟ್ಟಿದ್ದರು. ಸಿಬ್ಬಂದಿಗಳಾದ ಶಾಂತರಾಜು ಮತ್ತು ಮಂಜುನಾಥ ಅವರ ವಿರುದ್ಧ ಆರೋಪ ಮಾಡಿದ್ದರು. ಹೆಚ್ಎಸ್ಆರ್ ಲೇಔಟ್ ನಲ್ಲಿ ಒಂದೂವರೆ ಎಕರೆ ಭೂಸ್ವಾಧೀನ ಆಗಿದೆ. ಪರಿಹಾರ ನೀಡಿಲ್ಲ ಎಂದು ಬ್ರೋಕರ್ ಗಳು ಹೇಳಿದ್ದು, ಅಧಿಕಾರಿಗಳನ್ನು ನೋಡಲು ಬಂದಿರುವುದಾಗಿ ಅವರು ತಿಳಿಸಿದ್ದಾರೆ. ಬ್ರೋಕರ್ ಮಂಜುನಾಥ, ಆದಿ ನಾರಾಯಣ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...