alex Certify ಹಾನಗಲ್ ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ಬಿ.ಸಿ. ಪಾಟೀಲ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾನಗಲ್ ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ಬಿ.ಸಿ. ಪಾಟೀಲ್​​

ಹಾನಗಲ್​ ಉಪಚುನಾವಣಾ ಕಣ ರಂಗೇರಿದೆ. ಹಾನಗಲ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಿಎಂ ಬೊಮ್ಮಾಯಿ ಪ್ರಚಾರ ಕಾರ್ಯಕ್ಕೆ ಸಾಥ್​ ನೀಡಿದ ಸಚಿವ ಬಿ.ಸಿ. ಪಾಟೀಲ್​​​ ಕಾಂಗ್ರೆಸ್​ ಅಭ್ಯರ್ಥಿ ಶ್ರೀನಿವಾಸ್​ ಮಾನೆ ವಿರುದ್ಧ ಆರೋಪಗಳ ಸುರಿಮಳೆಯನ್ನೇಗೈದರು.

ಈ ಶ್ರೀನಿವಾಸ್​ ಮಾನೆ ಆಧುನಿಕ ಶಕುನಿ ತರ ಇದ್ದಾನೆ. ನಾನು ಕಾಂಗ್ರೆಸ್​ನಲ್ಲಿದ್ದ ವೇಳೆ ಈ ಅವತಾರವನ್ನು ನೋಡಿದ್ದೇನೆ. ಮೊದಲೇ ಹಾವೇರಿಯ ಹಲವು ಕ್ಷೇತ್ರಗಳ ಮೇಲೆ ಆತ ಕಣ್ಣು ಹಾಕಿದ್ದ. ಬ್ಯಾಡಗಿಯಲ್ಲಿ ಶಿವಣ್ಣನವರ ಸೀಟು ತಪ್ಪಿಸಿದ್ರು. ಹಾನಗಲ್​​ನಲ್ಲಿ ಮನೋಹರ್​ ತಹಶೀಲ್ದಾರ್​ ಸೀಟು ತಪ್ಪಿಸಿದ್ರು. ಮಾನೆ ನಂಬಿಕೆಗೆ ಅರ್ಹನಾದ ವ್ಯಕ್ತಿಯೇ ಅಲ್ಲ ಎಂದು ಬಿ.ಸಿ. ಪಾಟೀಲ್​ ಹೇಳಿದ್ರು.

ಇದೇ ವೇಳೆ ಬಸವರಾಜ ಬೊಮ್ಮಾಯಿ ವಿಚಾರವಾಗಿಯೂ ಮಾತನಾಡಿದ ಅವರು, ನಮಗೆ ಒಳ್ಳೆಯ ಆಕಳು ಸಿಕ್ಕಿದೆ. ನಮಗೆ ಎಷ್ಟು ಬೇಕೋ ಅಷ್ಟು ಹಾಲು ಹಿಂಡಿಕೊಳ್ಳೋಣ. ಹಾಲು ಅಂದರೆ ಅಭಿವೃದ್ಧಿ ಯೋಜನೆ ತಂದು ಕೆಲಸ ಮಾಡೋದು, ಮತ್ತೆ ಬೇರ ಏನೂ ಅಂದುಕೊಳ್ಳಬೇಡಿ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...