![](https://kannadadunia.com/wp-content/uploads/2023/10/tushar-girinath.jpg)
ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಲ್ಲಿ ನಕಲಿ ವಾಟ್ಸಾಪ್ ತೆರೆದಿರುವ ಕಿಡಿಗೇಡಿಗಳು, ಅಧಿಕಾರಿಗಳಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ.
ನಕಲಿ ನಂಬರ್ 9428053334 ಸಂಖ್ಯೆಯಿಂದ ಸಂದೇಶಗಳು ರವಾನೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ.
ಇದೆ ವೇಳೆ ಪಾಲಿಕೆ ಅಧಿಕಾರಿಗಳು ಅಲರ್ಟ್ ಆಗಿದ್ದು, ಈ ಸಂಖ್ಯೆಯಿಂದ ಕರೆ ಬಂದರೆ ಯಾವುದೇ ಸ್ಪಂದನೆ ಮಾಡಬೇಡಿ. ಒಂದು ವೇಳೆ ಈ ಸಂಖ್ಯೆಯಿಂದ ಕರೆ ಬಂದರೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಎಂದು ತಿಳಿಸಿದ್ದಾರೆ.