alex Certify ಕೆಆರ್​​ಎಸ್​ ವಾರ್​ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಆರ್​​ಎಸ್​ ವಾರ್​ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ

ರಾಜ್ಯದಲ್ಲಿ ಕನ್ನಂಬಾಡಿ ಕಾಳಗ ದಿನಕ್ಕೊಂದು ಆಯಾಮವನ್ನ ಪಡೆಯುತ್ತಿದೆ. ಡ್ಯಾಂ ಸುರಕ್ಷತೆ ವಿಚಾರವಾಗಿ ಶುರುವಾದ ವಿವಾದ ಇದೀಗ ವೈಯಕ್ತಿಕ ಹೇಳಿಕೆ ನೀಡುವವರೆಗೂ ಬಂದು ನಿಂತಿದೆ. ಇಂದು ಬೆಂಗಳೂರಿನಲ್ಲಿ ಕೆಆರ್​ಎಸ್​ ಡ್ಯಾಂ ವಿಚಾರವಾಗಿ ಸಂಸದೆ ಸುಮಲತಾ ಹಾಗೂ ಹೆಚ್​ಡಿಕೆ ನಡುವಿನ ಸಂಘರ್ಷದ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ ನಮ್ಮ ಡ್ಯಾಂ ಸುರಕ್ಷಿತವಾಗಿದೆಯಾ ಅನ್ನೋದಷ್ಟೇ ಮುಖ್ಯ ಎಂದು ಹೇಳಿದ್ರು.

ಸಂಸದೆ ಸುಮಲತಾ ಅಂಬರೀಶ್​ ಹಾಗೂ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ವೈಯಕ್ತಿಕ ಹೇಳಿಕೆಗಳ ವಿಚಾರವಾಗಿ ನಾನು ಏನನ್ನೂ ಹೇಳಲಾರೆ. ನಮಗೆ ಡ್ಯಾಂ ಸುರಕ್ಷಿತವಾಗಿರೋದಷ್ಟೇ ಮುಖ್ಯ. ಇದಕ್ಕೆ ಟೆಕ್ನಿಕಲ್ ಟೀಂ ವರದಿ ನೀಡಬೇಕು. ಈ ಹಿಂದೆ ಕೆಆರ್​ಎಸ್​ ಡ್ಯಾಂನ್ನು ಪರೀಕ್ಷೆ ಮಾಡಲಾಗಿತ್ತು. ಆಗ ಡ್ಯಾಂನಲ್ಲಿ 70 ವರ್ಷ ಹಳೆಯದಾದ ಗೇಟ್​ ಇದ್ದಿದ್ದರಿಂದ ನೀರು ಪೋಲಾಗುತ್ತಿತ್ತು. ಬಳಿಕ 2011ರಲ್ಲಿ ನಾವು ಹೊಸ ಗೇಟ್​ನ್ನು ಹಾಕಿಸಿದ್ದೇವು. ಗೇಟ್​ ಸರಿ ಮಾಡಿಸಿದ್ರೆ ಡ್ಯಾಂ ಸುರಕ್ಷಿತವಾಗಿ ಇರುತ್ತದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...