alex Certify SHOCKING: ಗುದದ್ವಾರಕ್ಕೆ ಗಾಳಿ ತುಂಬಿ ಸಹೋದ್ಯೋಗಿಯನ್ನೇ ಸಾಯಿಸಿದ ಪಾಪಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಗುದದ್ವಾರಕ್ಕೆ ಗಾಳಿ ತುಂಬಿ ಸಹೋದ್ಯೋಗಿಯನ್ನೇ ಸಾಯಿಸಿದ ಪಾಪಿಗಳು..!

ಮೂವರು ವ್ಯಕ್ತಿಗಳು ಸೇರಿಕೊಂಡು ಕೊಳವೆಯೊಂದನ್ನ ವ್ಯಕ್ತಿಯ ಗುದನಾಳಕ್ಕೆ ಹಾಕಿ ಗಾಳಿಯನ್ನ ಬಿಟ್ಟಿದ್ದರಿಂದ 16 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ಭೀಕರ ಘಟನೆ ಉತ್ತರ ಪ್ರದೇಶದ ಪಿಲಿಭಿತ್​ ಜಿಲ್ಲೆಯಲ್ಲಿ ನಡೆದಿದೆ.

ಮೃತ ಅಪ್ರಾಪ್ತ ಪಿಲಿಭಿತ್​ನ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮೃತ ಬಾಲಕನ ತಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾರ್ಚ್​ 4ನೇ ತಾರೀಖಿನಂದು ಮಿಲ್​ ಕೆಲಸ ಮಾಡುತ್ತಿದ್ದ ಮೂವರು ಕೆಲಸಗಾರರು ಆತನ ಗುದದಾದ್ವಾರಕ್ಕೆ ಈ ನಳಿಕೆಯನ್ನ ಸಿಕ್ಕಿಸಿ ಗಾಳಿ ಊದಿದ್ದಾರೆ ಎಂದು ಹೇಳಿದ್ದಾರೆ.

ಮಾರ್ಚ್ 4ನೇ ತಾರೀಖಿನಂದು ಅಪ್ರಾಪ್ತ ಊಟವನ್ನ ಸೇವಿಸಿದ ಬಳಿಕ ಅಮಿತ್​, ಸೂರಜ್​ ಹಾಗೂ ಕಮಲೇಶ್​​ ಎಂಬವರು ಸೇರಿಕೊಂಡು ಮಿಲ್​ನ ಏರ್​ ಕಂಪ್ರೆಸರ್​​ನ್ನು ಬಾಲಕನ ಖಾಸಗಿ ಅಂಗಕ್ಕೆ ನುಸುಳಿಸಿದ್ದಾರೆ. ಹಾಗೂ ಗಾಳಿಯನ್ನ ಊದಿದ್ದಾರೆ ಎಂದು ಮೃತ ಬಾಲಕನ ತಂದೆ ಹೇಳಿದ್ದಾರೆ.

ಈ ಘಟನೆ ನಡೆಯುತ್ತಿದ್ದಂತೆ ಬಾಲಕನನ್ನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...