alex Certify ಪೊಲೀಸ್ ಠಾಣೆ ಎದುರು ನಡುರಸ್ತೆಯಲ್ಲೇ ನಡೆದಿದೆ ಬೆಚ್ಚಿಬೀಳಿಸುವ ಘಟನೆ: ಓಡಿಹೋದ ತಂಗಿಯ ಜೀವ ತೆಗೆದ ಸಹೋದರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಠಾಣೆ ಎದುರು ನಡುರಸ್ತೆಯಲ್ಲೇ ನಡೆದಿದೆ ಬೆಚ್ಚಿಬೀಳಿಸುವ ಘಟನೆ: ಓಡಿಹೋದ ತಂಗಿಯ ಜೀವ ತೆಗೆದ ಸಹೋದರರು

ಲಖ್ನೋ: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಸಹೋದರರೇ ಚಾಕುವಿನಿಂದ ಇರಿದು ಬರ್ಬರವಾಗಿ ನಡುರಸ್ತೆಯಲ್ಲೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಪಲಿಯಾ ಗುಜಾರ್ ನಲ್ಲಿ ಘಟನೆ ನಡೆದಿದೆ. ಅರ್ಚನಾ ಕೊಲೆಯಾದ ಯುವತಿ. ಆಕೆ ತನ್ನ ಸಂಬಂಧಿಯಾದ ದೇವೇಂದ್ರನನ್ನು ಪ್ರೀತಿಸಿದ್ದು, ಜೂನ್ 28 ರಂದು ಮನೆಯಿಂದ ಓಡಿಹೋಗಿ ಮದುವೆಯಾಗಿದ್ದಳು. ಮಗಳು ದೇವೇಂದ್ರನನ್ನು ಮದುವೆಯಾಗುವುದು ಆಕೆಯ ತಂದೆ, ತಾಯಿಗೆ ಇಷ್ಟವಿರಲಿಲ್ಲ. ಮಗಳನ್ನು ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ದೇವೇಂದ್ರ ಮತ್ತು ಆತನ ಸಹೋದರರ ವಿರುದ್ಧ ಅರ್ಚನಾ ಮನೆಯವರು ದೂರು ದಾಖಲಿಸಿದ್ದರು.

ದತ್ತಗಂಜ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಹೇಳಿಕೆ ನೀಡಲು ಅರ್ಚನಾ, ದೇವೇಂದ್ರ ಹಾಗೂ ಅವರ ಸಹೋದರರೊಂದಿಗೆ ಪೊಲೀಸ್ ಠಾಣೆಗೆ ತೆರಳುತ್ತಿದ್ದ ವೇಳೆಯಲ್ಲಿ ಮಾರ್ಗ ಮಧ್ಯದಲ್ಲೇ ಅಡ್ಡಹಾಕಿದ ಅರ್ಚನಾ ಸಹೋದರರು ಹಾಗೂ ಇತರರು ನಡುರಸ್ತೆಯಲ್ಲಿ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಅರ್ಚನಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಪೊಲೀಸ್ ಠಾಣೆಗೆ ಸಮೀಪದಲ್ಲೇ ಘಟನೆ ನಡೆದಿದೆ. ದೇವೇಂದ್ರ ಪತ್ನಿ ಕೊಲೆ ಮಾಡಿದ ಅರ್ಚನಾ ಸೋದರರ ವಿರುದ್ಧ ದೂರು ನೀಡಿದ್ದಾರೆ. ಅರ್ಚನಾ ಸಹೋದರರು ಹಾಗೂ ಅವರ ಕುಟುಂಬದವರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...