alex Certify BIG NEWS: ತಂದೆಯನ್ನೇ ಕೊಲೆಗೈದ ಮಗ-ಸೊಸೆ; ನಾಲ್ವರು ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಂದೆಯನ್ನೇ ಕೊಲೆಗೈದ ಮಗ-ಸೊಸೆ; ನಾಲ್ವರು ಆರೋಪಿಗಳು ಅರೆಸ್ಟ್

ಬಾಗಲಕೋಟೆ: ಆಸ್ತಿ ಆಸೆಗಾಗಿ ಮಗ ಹಾಗೂ ಸೊಸೆ ಸೇರಿ ಸುಪಾರಿ ಕೊಟ್ಟು ತಂದೆಯನ್ನು ಕೊಲೆ ಮಡಿರುವ ಘಟನೆ ಬಾಗಲಕೋಟೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ಚೆನ್ನಪ್ಪ (68) ಕೊಲೆಯಾದ ದುರ್ದೈವಿ. 37 ಎಕರೆ ಜಮೀನು ಭಾಗ ಮಾಡುವ ವಿಚಾರವಾಗಿ ತಂದೆ-ಮಗನ ನಡುವೆ ಗಲಾಟೆಯಾಗಿತ್ತು. ಇದೇ ವಿಚಾರವಾಗಿ ಚೆನ್ನಪ್ಪ ಮಗ ಚೆನ್ನಬಸಪ್ಪ ಹಾಗೂ ಸೊಸೆ ಶಿವಬಸವ್ವ, ಚೆನ್ನಪ್ಪನ ಸ್ನೇಹಿತ ರಮೇಶ್ ಮನಗೂಳಿ ಜೊತೆ ಸೇರಿ ಕೊಲೆ ಮಾಡಲು ಸುಪಾರಿ ನೀಡಿದ್ದಾರೆ.

ಮಾಂತೇಶ್ ಮರಡಿಮಠ ಎಂಬಾತ 3 ಲಕ್ಷ ರೂಪಾಯಿ ಸುಪಾರಿ ಪಡೆದು ಚೆನ್ನಪ್ಪನನ್ನು ಜನವರಿ 25ರಂದು ರಾಂಪುರ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅನುಮಾನಗೊಂಡ ಪೊಲಿಸರು ಮಗ ಹಾಗೂ ಸೊಸೆಯನ್ನು ವಿಚಾರಿಸಿದ್ದು, ಆರೋಪಿಗಳಾದ ಮಗ ಚೆನ್ನಬಸಪ್ಪ, ಸೊಸೆ ಶಿವಬಸವ್ವ, ರಮೇಶ್ ಹಾಗೂ ಸುಪಾರಿ ಕಿಲ್ಲರ್ ಮಾಂತೇಶ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...