alex Certify ಸಿಎಂ ಜನತಾ ಸಂದರ್ಶನದಲ್ಲೇ ಶಾಸಕನ ವಿರುದ್ಧ ಹತ್ಯೆ ಆರೋಪ ಮಾಡಿದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಜನತಾ ಸಂದರ್ಶನದಲ್ಲೇ ಶಾಸಕನ ವಿರುದ್ಧ ಹತ್ಯೆ ಆರೋಪ ಮಾಡಿದ ಮಹಿಳೆ..!

ಬಿಹಾರ ಸಿಎಂ ನಿತೀಶ್​ ಕುಮಾರ್​​ ಜನತಾ ದರ್ಬಾರ್​ ನಡೆಸುವ ವೇಳೆ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಪಶ್ಚಿಮ ಚಂಪರಣ್​ ಜಿಲ್ಲೆಯ ನಿವಾಸಿಯಾದ ಮಹಿಳೆಯೊಬ್ಬರು ಜೆಡಿ(ಯು) ಶಾಸಕ ತಮ್ಮ ಪತಿಯನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಎಂ ನಿತೀಶ್​ ಕುಮಾರ್​ ಇದ್ದ ಸಾರ್ವಜನಿಕ ಸಭೆಗೆ ಆಗಮಿಸಿದ ಮಹಿಳೆ ಕುಮುದಾ ವರ್ಮ, ವಾಲ್ಮಿಕಿ ನಗರದ ಜೆಡಿಯು ಶಾಸಕ ಧೀರೇಂದ್ರ ಪ್ರತಾಪ್​ ಸಿಂಗ್​ ಅಲಿಯಾಸ್​​ ರಿಂಕು ಸಿಂಗ್​ ತಮ್ಮ ಪತಿ ದಯಾನಂದ ವರ್ಮಾರನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ.

ಜನತಾ ದರ್ಬಾರ್​ನಲ್ಲಿ ನ್ಯಾಯಕ್ಕಾಗಿ ಸಿಎಂ ನಿತೀಶ್​ ಕುಮಾರ್​ ಎದುರು ಪರಿ ಪರಿಯಾಗಿ ಬೇಡಿದ್ದಾರೆ. ತಮ್ಮ ಪತಿಯನ್ನು ಕೊಲೆ ಮಾಡಿದ್ದರೂ ಸಹ ಶಾಸಕನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಸಿಂಗ್​ ಹೆಸರಲ್ಲಿ ಎಫ್​ಐಆರ್​ ದಾಖಲಾಗಿದೆ, ಹಾಗೂ ಮೂವರನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ. ಆದರೆ ಸಿಂಗ್​ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಕುಮುದಾ ವರ್ಮಾರ ಎಲ್ಲಾ ಆರೋಪಗಳನ್ನು ಕೇಳಿದ ಸಿಎಂ ನಿತೀಶ್​ ಕುಮಾರ್​​​​, ಬಿಹಾರ ಡಿಜಿಪಿ ಬಳಿ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಿದ್ರು. ಡಿಜಿಪಿಗೆ ಸೂಚನೆ ನೀಡಿದ್ರೂ ಸಹ ಕುಮುದಾ ಮಾತ್ರ ಸಂತೃಪ್ತಿಗೊಂಡಂತೆ ಕಾಣುತ್ತಿರಲಿಲ್ಲ.

ನನ್ನ ಪತಿಯನ್ನು ನನ್ನ ಕಣ್ಣೆದುರೇ ಕೊಲೆ ಮಾಡಿದ್ದಾರೆ. ಶಾಸಕ ಸಿಂಗ್​ ನನ್ನ ಪತಿಯನ್ನು ಶೂಟ್​ ಮಾಡುವಂತೆ ಆರ್ಡರ್​ ನೀಡಿದ್ದರು. ಪದೇ ಪದೇ ಇದೇ ಮಾತನ್ನು ಹೇಳುತ್ತಿದ್ದ ಮಹಿಳೆ, ರಿಂಕು ಸಿಂಗ್​​ರನ್ನು ಬಂಧಿಸಿ ಎಂದು ಪರಿ ಪರಿಯಾಗಿ ಬೇಡಿದ್ದಾಳೆ.

ಕುಮುದಾ ವರ್ಮಾ ಪತಿ ದಯಾನಂದ ವರ್ಮಾ ಪಶ್ಚಿಮ ಚಂಪರನ್​​ನ ಜಿಲ್ಲಾ ಪರಿಷತ್​​ ಸದಸ್ಯರಾಗಿದ್ದರು. ಫೆಬ್ರವರಿಯಲ್ಲಿ ದಯಾನಂದ್​​ರನ್ನು ಸಿರ್ಸಿಯಾ ಚೌಕ್​ನಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿತ್ತು. ಈ ಹತ್ಯೆ ಸಂಬಂಧ ಕುಮುದಾ ವರ್ಮಾ, ರಿಂಕು ಸಿಂಗ್​ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...