alex Certify ಈ ರಾಶಿಯವರಿಗಿದೆ ಇಂದು ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಅದೃಷ್ಟ

ಮೇಷ : ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಪ್ರಮುಖ ಸುಧಾರಣೆ ಕಂಡು ಬರಲಿದೆ. ಕೆಲಸದಲ್ಲಿ ಬಡ್ತಿ ಸಿಕ್ಕು ಉನ್ನತ ಸ್ಥಾನಕ್ಕೆ ಏರಲಿದ್ದೀರಿ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಕೌಟುಂಬಿಕ ವಿಚಾರದಲ್ಲಿ ಜವಾಬ್ದಾರಿ ಹೆಚ್ಚಲಿದೆ.

ವೃಷಭ : ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ನೆಲೆಸಲಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟು ಅಂದುಕೊಂಡಿದ್ದನ್ನು ಸಾಧಿಸಲಿದ್ದಾರೆ.

ಮಿಥುನ : ಕೋಪದಿಂದ ದಾಂಪತ್ಯ ಜೀವನದ ನೆಮ್ಮದಿಯನ್ನು ನೀವೇ ಹಾಳು ಮಾಡಿಕೊಳ್ಳಲಿದ್ದೀರಿ. ಹೀಗಾಗಿ ತಾಳ್ಮೆಯಿಂದ ಇರೋದನ್ನು ಕಲಿಯಲೇಬೇಕು. ಆರ್ಥಿಕ ಪರಿಸ್ಥಿತಿಯು ಸಾಮಾನ್ಯವಾಗಿ ಇರಲಿದೆ. ಪೋಷಕರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.

ಕಟಕ : ಹಸಿರು ಬಣ್ಣದ ಬಟ್ಟೆಯು ನಿಮಗೆ ಶುಭವನ್ನು ತಂದು ಕೊಡಲಿದೆ. ಈ ದಿನ ನಿಮಗೆ ಸಾಮಾನ್ಯ ಎನಿಸಲಿದೆ. ಸಂಗಾತಿಯೊಡನೆ ಮನಸ್ತಾಪ ಉಂಟಾಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಉತ್ತಮ ಸಂಬಂಧ ಹೊಂದಲಿದ್ದೀರಿ.

ಸಿಂಹ : ಈ ದಿನ ವ್ಯಾಪಾರಗಳಿಗೆ ಶುಭ ದಿನವಾಗಿರಲಿದೆ. ಬೇರೆ ಉದ್ಯೋಗ ಮಾಡಬೇಕು ಎಂದು ಬಯಸುತ್ತಿದ್ದಲ್ಲಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ. ದಿನದ ಕೊನೆಯಲ್ಲಿ ಬೇಸರಗೊಳ್ಳಲಿದ್ದೀರಿ. ಸಂಗಾತಿ ಸಾಂತ್ವನದ ಮಾತು ನಿಮಗೆ ನೆಮ್ಮದಿ ನೀಡಲಿದೆ.

ಕನ್ಯಾ : ಆದಷ್ಟು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಯತ್ನಿಸಿ. ವಿದ್ಯಾರ್ಥಿಗಳಿಗೆ ಈ ದಿನ ಉತ್ತಮವಾಗಿ ಇರಲಿದೆ. ಉದ್ಯೋಗವನ್ನು ಅರಸುತ್ತಿರುವವರಿಗೆ ಪ್ರತಿಷ್ಠಿತ ಕಂಪನಿಯಿಂದ ಅವಕಾಶ ಹುಡುಕಿಕೊಂಡು ಬರಲಿದೆ.

ತುಲಾ : ನಿಮ್ಮ ಒರಟು ಮಾತಿನಿಂದ ಸ್ನೇಹಿತರನ್ನು ಕಳೆದುಕೊಳ್ಳುತ್ತಿದ್ದೀರಿ. ಹೀಗಾಗಿ ಆದಷ್ಟು ಮಿತಭಾಷೆ ಬಳಸಿ. ಇದರಿಂದ ಜನರನ್ನು ಕಳೆದುಕೊಳ್ಳೋದು ತಪ್ಪಲಿದೆ. ವ್ಯಾಪಾರಿಗಳಿಗೆ ಇದು ಶುಭ ದಿನ. ಹಣಕಾಸಿನ ಪರಿಸ್ಥಿತಿ ಸುಧಾರಿಲಿದೆ.

ವೃಶ್ಚಿಕ : ಕೆಲಸಕ್ಕೆ ಹೋಗುವ ಮುನ್ನ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುತ್ತೀರಿ. ಗರ್ಭಿಣಿಯರು ಹಾಗೂ ವೃದ್ಧರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಲಿದೆ.

ಧನು : ಕಚೇರಿಯಲ್ಲಿ ಅನಿರೀಕ್ಷಿತ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸಂಗಾತಿ ಜೊತೆ ಸಂಬಂಧ ಉತ್ತಮವಾಗಿ ಇರಲಿದೆ. ಪೋಷಕರ ಸಲಹೆ ಪಡೆದು ಉದ್ಯಮದಲ್ಲಿ ಮುಂದುವರಿಯಿರಿ.

ಮಕರ : ಕೆಲಸದ ಬಗ್ಗೆ ನೀವು ಗಂಭೀರವಾಗಿ ಇರಲಿದ್ದೀರಿ. ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲಿದ್ದಾರೆ. ಸಂಗಾತಿ ಜೊತೆ ಮನಸ್ತಾಪ ಇದ್ದರೆ ಕೂತು ಮಾತನಾಡಿ. ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದಾಗಿದೆ.

ಕುಂಭ : ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಪದೇ ಪದೇ ಕಾಡುತ್ತಿದೆ. ಹೀಗಾಗಿ ದೂರ ಪ್ರಯಾಣದಿಂದ ತುಸು ದೂರದಲ್ಲೇ ಇರಿ. ಆರ್ಥಿಕ ಸ್ಥಿತಿ ಬಲವಾಗಲಿದೆ. ಕೆಂಪು ನಿಮ್ಮ ಅದೃಷ್ಟದ ಬಣ್ಣವಾಗಿದೆ.

ಮೀನ : ನವವಿವಾಹಿತರಿಗೆ ಇದು ಒಳ್ಳೆಯ ದಿನವಲ್ಲ. ಸಂಗಾತಿಯ ಜೊತೆ ಮನಸ್ತಾಪ ಉಂಟಾಗಬಹುದು. ಕೋಪ ಕಡಿಮೆ ಮಾಡಿಕೊಳ್ಳಿ. ಹೊಸ ಆದಾಯದ ಮೂಲವೊಂದು ನಿಮ್ಮನ್ನ ಹುಡುಕಿಕೊಂಡು ಬರಲಿದೆ. ಸ್ನೇಹಿತರ ಜೊತೆ ಒಳ್ಳೆಯ ಸಮಯ ಕಳೆಯುತ್ತೀರಿ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...