alex Certify ಈ ರಾಶಿಯವರಿಗೆ ಇಂದು ಪ್ರತಿಷ್ಟಿತ ಕಂಪನಿಯ ಉದ್ಯೋಗ ಅರಸಿ ಬರಲಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಪ್ರತಿಷ್ಟಿತ ಕಂಪನಿಯ ಉದ್ಯೋಗ ಅರಸಿ ಬರಲಿದೆ

ಮೇಷ: ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಟಿತ ಕಂಪನಿಯಲ್ಲಿ ಉದ್ಯೋಗ ಅರಸಿ ಬರಲಿದೆ. ರಾಜಕೀಯ ವೃತ್ತಿಯಲ್ಲಿ ಇರುವವರಿಗೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಮನ್ನಣೆ ದೊರಕಲಿದೆ.

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತು ತಲೆಯಲ್ಲಿ ಇರಲಿ. ವಿದ್ಯಾರ್ಥಿಗಳಿಗೆ ಅಂದು ಕೊಂಡ ಕಾರ್ಯದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.

ವೃಷಭ : ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡುತ್ತಿಲ್ಲ ಎಂದು ಪೋಷಕರು ಚಿಂತೆಗೀಡಾಗುವ ಸಾಧ್ಯತೆ ಇದೆ. ಆದರೆ ಮಕ್ಕಳ ಮೇಲೆ ನಿಮ್ಮ ಕೋಪ ತಾಪವನ್ನು ತೋರಿಸುವ ಅಗತ್ಯವಿಲ್ಲ. ಬುದ್ಧಿವಾದ ಹೇಳುವ ಮೂಲಕವೂ ಮಕ್ಕಳನ್ನು ತಿದ್ದಬಹುದಾಗಿದೆ. ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ.

ಮಿಥುನ : ತಡವಾಗಿಯಾದರೂ ಸರಿ ಕಚೇರಿಯಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರಲಿದೆ. ನಿಮ್ಮ ಕೆಲಸದ ಮೇಲಿನ ಶ್ರದ್ಧೆ ನಿಮ್ಮನ್ನು ಬೇರೆ ದಿಕ್ಕಿಗೆ ಕರೆದೊಯ್ಯಲಿದೆ. ಕುಟುಂಬಸ್ಥರ ಜೊತೆ ಪ್ರವಾಸಕ್ಕೆ ತೆರಳಲಿದ್ದೀರಿ. ಸಂಗಾತಿಯು ನಿಮಗೆ ಉತ್ತಮ ಉಡುಗೊರೆ ನೀಡಲಿದ್ದಾರೆ.

ಕಟಕ : ಜವಳಿ ಉದ್ಯಮಿಗಳಿಗೆ ಇಂದು ಲಾಭಾಂಶ ಸಿಗಲಿದೆ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣಕ್ಕೆ ಹೋಗುವ ಅವಕಾಶ ಕೂಡಿಬರಬಹುದು. ನಿಮ್ಮ ಅತಿಯಾದ ಕೋಪವು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಬಹುದು. ಹೀಗಾಗಿ ಆದಷ್ಟು ತಾಳ್ಮೆ ಕಾಯ್ದುಕೊಳ್ಳಿ.

ಸಿಂಹ :  ಪಿತ್ರಾರ್ಜಿತ ಆಸ್ತಿ ಪಾಲು ವಿಚಾರದಲ್ಲಿ ನೀವು ಕೊಂಚ ಅಸಮಾಧಾನ ಪಡುವ ಸಾಧ್ಯತೆ ಇದೆ. ಈ ವಿಚಾರವಾಗಿ ಕುಟುಂಬದಲ್ಲಿ ಕಲಹ ಕೂಡ ಉಂಟಾಗಬಹುದು. ಹೊಸ ಮನೆ ನಿರ್ಮಾಣದ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯಲಿದೆ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.

ಕನ್ಯಾ : ಹೋಟೆಲ್​ ಉದ್ಯಮಿಗಳಿಗೆ ಇದು ಶುಭ ದಿನ. ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಮನೆಯ ಕಿರಿಯ ಸದಸ್ಯರಿಂದ ಶುಭ ಸುದ್ದಿ ಕಾದಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ.

ತುಲಾ : ನಿಮ್ಮ ಮೌನ ಅನೇಕ ಬಾರಿ ಒಳ್ಳೆಯದಕ್ಕೆ ಕಾರಣವಾಗಲಿದೆ, ಆದರೆ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡದೇ ಹೋದರೂ ಕೂಡ ಕಷ್ಟವಿದೆ. ವೈವಾಹಿಕ ಸಂಬಂಧಕ್ಕೆ ಅರಸುತ್ತಿರುವವರಿಗೆ ಶುಭ ಸುದ್ದಿ ಇದೆ. ಪೋಷಕರ ಜೊತೆ ವಾದಕ್ಕೆ ಇಳಿಯಬೇಡಿ.

ವೃಶ್ಚಿಕ : ಉದ್ಯಮವನ್ನು ವಿಸ್ತರಿಸುವ ಬಗ್ಗೆ ಪೋಷಕರ ಜೊತೆ ಚರ್ಚೆ ನಡೆಸಲಿದ್ದೀರಿ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನೂರು ಬಾರಿ ಯೋಚನೆ ಮಾಡುವುದು ಉತ್ತಮ. ಸಂಪಾದನೆ ಉಳಿಯಬೇಕು ಅಂದರೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು.

ಧನು : ಪದೇ ಪದೇ ಅನಾರೋಗ್ಯ ಕೈಕೊಡುತ್ತಿದೆ. ಇದರಿಂದ ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಲಿದ್ದೀರಿ.  ಕಷ್ಟದ ಸಮಯದಲ್ಲಿ ಜೊತೆ ನಿಲ್ಲಬೇಕಾದ ಸ್ನೇಹಿತರು ನಿಮ್ಮ ಕೈ ಬಿಡಲಿದ್ದಾರೆ. ಕಷ್ಟ ಕಾಲದಲ್ಲಿ ಸ್ನೇಹಿತರ ನಿಜ ಬಣ್ಣ ಏನೆಂದು ನಿಮಗೆ ತಿಳಿಯಲಿದೆ.

ಮಕರ: ನಿಮ್ಮ ಅತಿಯಾದ ಕೋಪವು ಪತ್ನಿಯ ಅಸಾಮಾಧನಕ್ಕೆ ಕಾರಣವಾಗಲಿದೆ. ಇದರಿಂದ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಕೂಡ ಮೂಡಬಹುದು. ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಹೊರಗಿನ ಆಹಾರ ಸೇವನೆ ಹೆಚ್ಚು ಸೂಕ್ತವಲ್ಲ.

ಕುಂಭ : ವ್ಯಾಪಾರಿಗಳಿಗೆ ಬೆಳಗ್ಗಿನ ಹೊತ್ತು ನಷ್ಟ ಉಂಟಾಗಲಿದೆ. ಹಾಗೆಂದು ವಿಚಲಿತರಾಗಬೇಡಿ. ಮಧ್ಯಾಹ್ನದ ಬಳಿಕ ವ್ಯವಹಾರದಲ್ಲಿ ಚೇತರಿಕೆ ಕಾಣಲಿದೆ. ಕೋರ್ಟ್ – ಕಚೇರಿ ವ್ಯವಹಾರದಲ್ಲಿ ಜಯ ನಿಮ್ಮದಾಗಲಿದೆ. ಸೋಲೇ ಗೆಲುವಿನ ಮೆಟ್ಟಿಲು ಎಂಬ ಮಾತಿನ ಮೇಲೆ ನಂಬಿಕೆ ಇಡಿ.

ಮೀನ : ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಾಧ್ಯತೆ ಇದೆ. ಇದರಿಂದ ನೀವು ಮಾನಸಿಕವಾಗಿ ಕುಗ್ಗಲಿದ್ದೀರಿ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮನೆಗೆ ಅನಿರೀಕ್ಷಿತ ಅತಿಥಿಯ ಆಗಮನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...