alex Certify ಈ ರಾಶಿಯವರಿಗಿದೆ ಇಂದು ಕುಲದೇವರ ಅನುಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಕುಲದೇವರ ಅನುಗ್ರಹ

ಮೇಷ: ನಿಮ್ಮ ಮಾತಿನ ಜಾಣ್ಮೆಯಿಂದ ಕುಟುಂಬದಲ್ಲಿ ದೊಡ್ಡ ಕಲಹವನ್ನು ವಾಸಿ ಮಾಡಲಿದ್ದೀರಿ.

ಸಂಗಾತಿಯಿಂದ ಕೊಂಚ ಕಿರಿಕಿರಿ ಅನುಭವಿಸಬೇಕಾಗಿ ಬಂದೀತು. ಇದರಿಂದ ನಿಮ್ಮ ನೆಮ್ಮದಿ ಕೆಡಲಿದೆ. ವಾಹನ ಖರೀದಿ ಮಾಡುವ ಸಾಧ್ಯತೆ ಇದೆ.

ವೃಷಭ : ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಿದ್ದಾರೆ. ಇದು ನಿಮ್ಮ ಚಿಂತೆಗೆ ಕಾರಣವಾಗಲಿದೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಮಕ್ಕಳ ಓದಿಗೆ ನೀವೂ ನೆರವಾಗಿ, ಕಚೇರಿ ಕೆಲಸದಲ್ಲಿ ನೆಮ್ಮದಿ. ಸಾಲಗಾರರ ಕಾಟ ತಪ್ಪಿದ್ದಲ್ಲ. ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.

ಮಿಥುನ : ಮಕ್ಕಳು ಹೇಳಿದ ಮಾತು ಕೇಳುತ್ತಿಲ್ಲ ಎಂದು ಕೊರಗುವಿರಿ. ಆರೋಗ್ಯದ ಕಡೆ ಆದಷ್ಟು ಕಾಳಜಿ ವಹಿಸಿ. ಹೊರಗಿನ ಆಹಾರ ಸೇವನೆ ಮಾಡಬೇಡಿ. ಉದ್ಯಮದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ಸಂಗಾತಿಯ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ.

ಕಟಕ : ತಾಯಿಯಿಂದ ನಿಮಗೆ ಕೊಂಚ ಕಿರಿಕಿರಿ ಉಂಟಾಗಲಿದೆ. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ತಾಳ್ಮೆಯಿಂದ ಇದನ್ನು ನಿಭಾಯಿಸಿ. ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಕುಲದೇವರ ಅನುಗ್ರಹದಿಂದ ಎಲ್ಲವೂ ಒಳಿತಾಗಲಿದೆ.

ಸಿಂಹ : ವಿದ್ಯಾರ್ಥಿಗಳಿಗೆ ಗುರುವಿನ ಕೃಪೆಯಿದೆ. ಹೀಗಾಗಿ ಅಂದುಕೊಂಡ ಗುರಿಯನ್ನು ಸಾಧಿಸಲಿದ್ದಾರೆ. ಸಂಗಾತಿಯನ್ನು ಓಲೈಸಲು ಹಲವು ಸಾಹಸ ಮಾಡಬೇಕಾಗಿ ಬರಬಹುದು. ಮನೆಗೆ ಅನಿರೀಕ್ಷಿತ ಅತಿಥಿ ಆಗಮನವಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ.

ಕನ್ಯಾ : ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡಲಿದ್ದೀರಿ. ಪೋಷಕರ ಆರೋಗ್ಯ ಕೆಡುವುದರಿಂದ ಕೊಂಚ ಒತ್ತಡ ಉಂಟಾಗಲಿದೆ. ವೈವಾಹಿಕ ಸಂಬಂಧಕ್ಕಾಗಿ ಅರಸುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಕುಲದೇವತೆ ದರ್ಶನ ಮಾಡಲಿದ್ದೀರಿ.

ತುಲಾ : ಸಂಗಾತಿಯಿಂದ ಬೆಲೆಬಾಳುವ ಉಡುಗೊರೆ ಸಿಗಲಿದೆ. ಇದು ನಿಮ್ಮ ಇಂದಿನ ಸಂತೋಷವನ್ನು ಇಮ್ಮಡಿ ಮಾಡಲಿದೆ. ನಿಮ್ಮಿಂದ ಸಹಾಯ ಪಡೆದವರೇ ನಿಮಗೆ ಬೆನ್ನ ಹಿಂದೆ ಚೂರಿ ಹಾಕಲಿದ್ದಾರೆ. ಇದು ನಿಮ್ಮ ಮನಸ್ಸಿಗೆ ಘಾಸಿ ಮಾಡಲಿದೆ.

ವೃಶ್ಚಿಕ : ಪರಸ್ತ್ರೀಯರೊಂದಿಗೆ ಅತಿಯಾದ ಸಲುಗೆ ಬೇಡ. ದಾಂಪತ್ಯದಲ್ಲಿ ವಿರಸ ಮೂಡಲಿದೆ. ನೀವು ಮಾಡದ ತಪ್ಪಿಗೆ ಸಂಗಾತಿ ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ.

ಧನು : ನಿಮ್ಮ ಪೋಷಕರು ಇಷ್ಟು ವರ್ಷ ನಿಮ್ಮಿಂದ ಮುಚ್ಚಿಟ್ಟ ಸತ್ಯವೊಂದು ಇಂದು ಹೊರಬೀಳಲಿದೆ. ಇದರಿಂದ ನೀವು ಆಘಾತಕ್ಕೆ ಒಳಗಾಗುವಿರಿ. ಕಷ್ಟದ ದಿನಗಳಲ್ಲಿ ನಿಮಗೆ ಹೆಗಲು ನೀಡಬೇಕಿದ್ದ ಸ್ನೇಹಿತರು ನಿಮ್ಮಿಂದ ದೂರಾಗಲಿದ್ದಾರೆ.

ಮಕರ : ನೀವು ಎಷ್ಟೇ ಪ್ರಯತ್ನ ಪಟ್ಟರೂ ಕಚೇರಿಯಲ್ಲಿ ಕೆಲಸಗಳಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ಇದು ಮೇಲಾಧಿಕಾರಿಗಳಿಗೆ ನಿಮ್ಮ ಮೇಲಿನ ಅಸಮಾಧಾನಕ್ಕೆ ಕಾರಣವಾಗಲಿದೆ. ಹೀಗಾಗಿ ಆದಷ್ಟು ಬೇಗ ಇದನ್ನು ಸರಿಪಡಿಸಿಕೊಳ್ಳಿ. ಸಂಗಾತಿ ನಿಮ್ಮ ಕಷ್ಟಕ್ಕೆ ಹೆಗಲು ನೀಡಲಿದ್ದಾರೆ.

ಕುಂಭ : ಕಠಿಣ ಪರಿಶ್ರಮ ಒಂದನ್ನು ಬಿಟ್ಟರೆ ಹಣ ಮಾಡಲು ಇನ್ಯಾವ ಮಾರ್ಗವನ್ನೂ ಆಯ್ಕೆ ಮಾಡಿಕೊಳ್ಳಬೇಡಿ. ಸತತ ಪ್ರಯತ್ನವೊಂದೇ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇರುವ ಮಾರ್ಗ ಎನ್ನುವುದು ತಲೆಯಲ್ಲಿ ಇರಲಿ. ಪೋಷಕರ ಜೊತೆ ಅನಗತ್ಯ ವಾದ ಬೇಡ. ಜವಳಿ ಉದ್ಯಮಿಗಳಿಗೆ ಲಾಭವಿದೆ.

ಮೀನ : ಈಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಇನ್ನಷ್ಟು ಕಷ್ಟ ಪಡಲೇಬೇಕು. ಸಮಯ ಸಾಧಕರಿಂದ ಅಂತರ ಕಾಯ್ದುಕೊಳ್ಳಿ. ಅವರ ಮೋಸದ ಜಾಲಕ್ಕೆ ಬೀಳಬೇಡಿ. ಶನೇಶ್ಚರನ ಧ್ಯಾನ ಮಾಡಿ. ಕಷ್ಟ ಕಾಲದಲ್ಲಿ ಸ್ನೇಹಿತರ ನಿಜ ಬಣ್ಣ ತಿಳಿಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...