alex Certify ಈ ʼರಾಶಿʼಯವರು ಇಂದು ದೂರ ಪ್ರಯಾಣ ಮಾಡುವ ವೇಳೆ ಇರಲಿ ಎಚ್ಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼರಾಶಿʼಯವರು ಇಂದು ದೂರ ಪ್ರಯಾಣ ಮಾಡುವ ವೇಳೆ ಇರಲಿ ಎಚ್ಚರ….!

ಮೇಷ : ಅತಿಯಾದ ಒತ್ತಡದಿಂದ ಕಚೇರಿ ಕೆಲಸಗಳನ್ನು ಮಾಡಬೇಡಿ. ಇದು ದೇಹದ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ಗುರುವಿನ ಮುಂದೆ ಅತಿಯಾದ ಅಹಂಕಾರ ತೋರುವುದು ಒಳ್ಳೆಯದಲ್ಲ. ದೂರ ಪ್ರಯಾಣದ ವೇಳೆ ಎಚ್ಚರಿಕೆ ಇರಲಿ.

ವೃಷಭ: ಈ ದಿನ ನಿಮಗೆ ಆರ್ಥಿಕವಾಗಿ ಲಾಭ ಕಾದಿದೆ. ನಿಮ್ಮಿಂದ ಸಾಲ ಪಡೆದವರು ಬಡ್ಡಿ ಸಮೇತ ಹಣವನ್ನು ತೀರಿಸಲಿದ್ದಾರೆ. ವ್ಯಾಪಾರ ವ್ಯವಹಾರದಲ್ಲೂ ನಿಮಗೆ ಧನಲಾಭವಿದೆ. ಸಾಧ್ಯವಾದಷ್ಟು ದಾನ ಧರ್ಮಗಳನ್ನು ಮಾಡಿ. ಪೋಷಕರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ಮಿಥುನ : ನಿಮ್ಮ ಮನಸ್ಸಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಗೊಂದಲಕ್ಕೆ ಇಂದು ಪರಿಹಾರ ಸಿಗಲಿದೆ. ಇದರಿಂದ ನೀವು ನಿರಾಳತೆ ಅನುಭವಿಸಲಿದ್ದೀರಿ. ಅತಿಯಾದ ಕೋಪದಿಂದ ಸಂಗಾತಿಯ ಮನಸ್ಸಿಗೆ ನೋವುಂಟು ಮಾಡುತ್ತಿದ್ದೀರಿ. ಮುಂದೆ ಅತಿಯಾಗಿ ಪಶ್ಚಾತಾಪ ಪಡಬೇಕಾಗಿ ಬಂದೀತು.

ಕಟಕ : ಚಿಕ್ಕ ಚಿಕ್ಕ ಆರೋಗ್ಯ ಸಮಸ್ಯೆಗಳಿಗೂ ಅತಿಯಾದ ಔಷಧ ಸೇವನೆ ಸೂಕ್ತವಲ್ಲ. ಕೆಲವೊಂದು ದೇಹದ ಸಮಸ್ಯೆಗಳಿಗೆ ಮನೆ ಮದ್ದುಗಳನ್ನೂ ಬಳಕೆ ಮಾಡಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕಾದ ಅನಿವಾರ್ಯತೆ ಇದೆ. ಸ್ತ್ರೀಯರಿಗೆ ಧನಲಾಭವಿದೆ.

ಸಿಂಹ : ನಿಮ್ಮ ಬುದ್ಧಿವಂತಿಕೆಯೇ ನಿಮ್ಮನ್ನು ಎಲ್ಲಾ ಜಟಿಲ ಸಮಸ್ಯೆಗಳಿಂದ ಪಾರು ಮಾಡಲಿದೆ. ಇದರಿಂದ ಪ್ರಶಂಸೆಯನ್ನೂ ಗಿಟ್ಟಿಸಿಕೊಳ್ಳಲಿದ್ದೀರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.

ಕನ್ಯಾ : ವ್ಯಾಪಾರಿಗಳಿಗೆ ಬೆಳಗ್ಗೆ ಹೊತ್ತು ಕೊಂಚ ನಷ್ಟ ಎನಿಸಿದರೂ ಸಹ ಕ್ರಮೇಣವಾಗಿ ಚೇತರಿಸಿಕೊಳ್ಳುತ್ತೀರಿ. ಇಂದು ಅಗ್ನಿಯಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಕುಟುಂಬಸ್ಥರ ಜೊತೆ ಸೇರಿ ಕುಲದೇವರ ದರ್ಶನ ಮಾಡಿ. ದವಸ, ಧಾನ್ಯಗಳನ್ನು ದಾನ ಮಾಡಿ. ದೈವಾನುಗ್ರಹವಿದೆ.

ತುಲಾ : ವೈವಾಹಿಕ ಸಂಬಂಧಕ್ಕಾಗಿ ಬಹಳ ದಿನಗಳಿಂದ ಅರಸುತ್ತಿದ್ದವರಿಗೆ ಕಂಕಣ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಆಸ್ತಿ ಖರೀದಿ ಮಾಡುವ ಬಗ್ಗೆ ಸಂಗಾತಿ ಜೊತೆ ಚರ್ಚೆ ನಡೆಸಲಿದ್ದೀರಿ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವ ಸಾಧ್ಯತೆ ಇದೆ.

ವೃಶ್ಚಿಕ : ಕೌಟುಂಬಿಕ ಜೀವನದಲ್ಲಿ ಮಾನಸಿಕವಾಗಿ ನೆಮ್ಮದಿ ಅನುಭವಿಸಲಿದ್ದೀರಿ. ಅಂದುಕೊಂಡ ಕೆಲಸಗಳು ಕೈಗೂಡದೇ ಇರೋದ್ರಿಂದ ಬೇಸರಕ್ಕೆ ಒಳಗಾಗುವ ಸಾಧ್ಯತೆ ಇದೆ. ಶಿವನನ್ನು ಆರಾಧಿಸಿ. ಆರೋಗ್ಯದ ದೃಷ್ಟಿಯಿಂದ ಹೊರಗಿನ ಆಹಾರ ಸೇವನೆಯನ್ನು ನಿಯಂತ್ರಿಸಿ.

ಧನು : ನೀವು ಎಷ್ಟು ಹಣವನ್ನು ಗಳಿಸುತ್ತೀರೋ ಅದು ಸಂಪಾದನೆಯಲ್ಲ. ಬದಲಾಗಿ ಗಳಿಸಿದ ಹಣದಲ್ಲಿ ನೀವೆಷ್ಟು ಉಳಿಸುತ್ತಿರೋ ಅದೇ ನಿಮ್ಮ ಸಂಪಾದನೆ ಎಂಬ ಮಾತು ತಲೆಯಲ್ಲಿರಲಿ. ನಿಮ್ಮ ಪ್ರಾಮಾಣಿಕತನಕ್ಕೆ ಪ್ರಶಂಸೆ ಕೇಳಿ ಬರಲಿದೆ. ಕಚೇರಿ ಕೆಲಸದಲ್ಲಿ ನೆಮ್ಮದಿ ಇದೆ.

ಮಕರ : ಯಾವುದೇ ಕೆಲಸದಲ್ಲಿ ವೈಫಲ್ಯ ಎದುರಾಗಿದೆ ಎಂದು ಕುಗ್ಗದಿರಿ. ಮರಳಿ ಯತ್ನವ ಮಾಡಿ. ಖಂಡಿತವಾಗಿಯೂ ಯಶಸ್ಸು ಪ್ರಾಪ್ತಿಯಾಗಲಿದೆ. ಕೋಪದ ಕೈಗೆ ಬುದ್ಧಿ ಕೊಡಬೇಡಿ. ಆದಷ್ಟು ಸೌಜನ್ಯದಿಂದ ವರ್ತಿಸಿ. ಜವಳಿ ವ್ಯಾಪಾರಿಗಳು, ಕೃಷಿಕರಿಗೆ ಇದು ಲಾಭದ ದಿನವಾಗಿದೆ.

ಕುಂಭ : ನೆರೆ ಹೊರೆಯವರೊಂದಿಗೆ ಸೌಜನ್ಯದಿಂದ ವರ್ತಿಸಿ. ಅತಿಯಾದ ಅಹಂಕಾರ ಒಳ್ಳೆಯದಲ್ಲ. ಎಲ್ಲರ ಮಾತನ್ನು ನಂಬಿ ಮೋಸಕ್ಕೆ ಒಳಗಾಗಬೇಡಿ. ಹೊಗಳಿಕೆಗಳನ್ನು ಓರೆಗಲ್ಲಿಗೆ ಹಚ್ಚಿ ನೋಡಿ. ವಿಷಯವನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುವುದನ್ನು ರೂಡಿಸಿಕೊಂಡಲ್ಲಿ ಒಳಿತಿದೆ.

ಮೀನ : ಈ ಹಿಂದೆ ನಿಮ್ಮ ಕಷ್ಟದಲ್ಲಿ ಕೈ ಹಿಡಿದವರಿಗೆ ಕೃತಜ್ಞತೆ ಸಲ್ಲಿಸಿ. ಅನ್ಯರ ವಿಚಾರದಲ್ಲಿ ಮೂಗು ತೂರಿಸಬೇಡಿ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...