alex Certify ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭ

ಮೇಷ : ಇಂದು ನಿಮಗೆ ಅನಿರೀಕ್ಷಿತ ಮೂಲದಿಂದ ಹಣ ಹರಿದು ಬರಲಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾದೀತು. ವೃತ್ತಿ ರಂಗದಲ್ಲಿ ಹಿತಶತ್ರುಗಳ ಕಾಟ ತಪ್ಪಿದ್ದಲ್ಲ. ವಾಹನದಿಂದ ಅಪಘಾತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದಿರಿ.

ವೃಷಭ : ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ನೀವು ಮಾನಸಿಕವಾಗಿ ಕುಗ್ಗಲಿದ್ದೀರಿ. ಸಾಲಭಾದೆ ನಿಮ್ಮ ಬೆನ್ನು ಬಿಡುವುದಿಲ್ಲ. ಕುಟಂಬದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ.

ಮಿಥುನ: ಬಹಳ ದಿನಗಳಿಂದ ಖರೀದಿಸಬೇಕು ಎಂದು ಆಸೆ ಪಟ್ಟಿದ್ದ ವಸ್ತುವೊಂದನ್ನು ಇಂದು ಖರೀದಿ ಮಾಡಲಿದ್ದೀರಿ. ಇದರಿಂದ ನೀವು ಇಡೀ ದಿನ ಸಂತಸದಿಂದ ಇರಲಿದ್ದೀರಿ. ಕುಟುಂಬದಲ್ಲಿ ಆಕಸ್ಮಿಕ ದುರ್ಘಟನೆಯೊಂದು ಸಂಭವಿಸಲಿದೆ. ಮಾನಸಿಕವಾಗಿ ಸಿದ್ಧರಾಗಿರಿ.

ಕಟಕ : ನಿಮ್ಮ ಜೀವನದ ಬಗ್ಗೆ ಕುಟುಂಬಸ್ಥರೇ ಆಡಿಕೊಳ್ಳಲಿದ್ದಾರೆ. ಇದರಿಂದ ನೀವು ಅತಿಯಾಗಿ ಮುಜುಗರಕ್ಕೆ ಒಳಗಾಗುವಿರಿ. ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಹಿನ್ನಡೆ ಕಾದಿದೆ. ಆರ್ಥಿಕ ಸ್ಥಿತಿ ಕೊಂಚ ಸುಧಾರಿಸಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ.

ಸಿಂಹ : ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಇಂದು ಲಾಭ ಕಾದಿದೆ. ಮಕ್ಕಳಿಂದ ನಿಮಗೆ ಆರ್ಥಿಕವಾಗಿ ನಷ್ಟ ಸಂಭವಿಸಲಿದೆ. ಸಂಗಾತಿಗೆ ದುಬಾರಿ ಬೆಲೆಯ ಉಡುಗೊರೆ ನೀಡಲಿದ್ದೀರಿ. ವೃತ್ತಿ ಜೀವನದಲ್ಲಿ ಕೊಂಚ ಸಂಕಷ್ಟ ಎದುರಾಗಲಿದೆ.

ಕನ್ಯಾ : ವಿಪರೀತವಾಗಿ ಬೆನ್ನು ನೋವಿನ ಸಮಸ್ಯೆಯು ನಿಮ್ಮನ್ನು ಕಾಡಲಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆ ಅನುಭವಿಸಲಿದ್ದಾರೆ. ಮಹಿಳೆಯರಿಗೆ ಈ ದಿನ ಅನುಕೂಲಕಾರಿಯಾಗಿದೆ. ಹಳೆಯ ಸಾಲಗಳು ತೀರಲಿದೆ.

ತುಲಾ : ಆರ್ಥಿಕ ವ್ಯವಹಾರಗಳ ವಿಚಾರದಲ್ಲಿ ನಿಮ್ಮ ಆತುರದ ಬುದ್ಧಿಯು ದೊಡ್ಡ ನಷ್ಟವನ್ನೇ ತರಲಿದೆ. ಹೀಗಾಗಿ ಆದಷ್ಟು ಎಚ್ಚರಿಕೆಯಿಂದಿರಿ. ಮಕ್ಕಳಿಗೆ ವಿದ್ಯಾಭ್ಯಾಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಕೃಷಿಕರಿಗೆ, ಕುಂಬಾರರಿಗೆ ಇಂದು ಲಾಭವಿದೆ.

ವೃಶ್ಚಿಕ : ದಾಂಪತ್ಯ ಜೀವನದಲ್ಲಿ ಮೊಂಡುವಾದ ನಿಲ್ಲಿಸಿ. ಇದರಿಂದ ನಿಮ್ಮ ನೆಮ್ಮದಿಯೇ ಕೆಡಲಿದೆ. ಹೊಸ ವ್ಯಾಪಾರ – ವ್ಯವಹಾರವನ್ನು ಆರಂಭಿಸಲಿದ್ದೀರಿ. ಆಕಸ್ಮಿಕವಾಗಿ ಧನಲಾಭ ಸಂಭವಿಸಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲವಿದೆ.

ಧನು : ಮನೆಗೆ ಪೀಠೋಪಕರಣಗಳ ಖರೀದಿ ಮಾಡಲಿದ್ದೀರಿ. ಇದರಿಂದ ಇಂದು ನಿಮಗೆ ಆರ್ಥಿಕವಾಗಿ ಹೊಡೆತ ಬೀಳಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇಂದು ನೀವು ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ.

ಮಕರ : ನೀವು ಅಂದುಕೊಂಡ ಕಾರ್ಯಗಳು ನೆರವೇರುವುದರ ಬದಲು ವಿಳಂಬ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲಿಂದು ವ್ಯತ್ಯಾಸ ಉಂಟಾಗಬಹುದು. ನಿಮ್ಮ ಚಂಚಲ ಮನಸ್ಸಿನಿಂದಾಗಿ ವ್ಯಾಪಾರದಲ್ಲಿ ನಷ್ಟ ಉಂಟಾಗಲಿದೆ. ಅಗ್ನಿಯಿಂದ ದೂರವಿರಿ.

ಕುಂಭ : ಕೆಲಸದ ನಿಮಿತ್ತ ಇಂದು ದೂರ ಪ್ರಯಾಣ ಕೈಗೊಳ್ಳಲಿದ್ದೀರಿ. ಸಂಗಾತಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಕಲಹ ಉಂಟಾಗಲಿದೆ. ಕಚೇರಿ ಕೆಲಸದಲ್ಲಿ ಸಹೋದ್ಯೋಗಿಗಳ ಕುತಂತ್ರಕ್ಕೆ ನೀವು ಬಲಿಯಾಗುವಿರಿ. ಪುತ್ರಿಗೆ ವಿವಾಹ ಯೋಗ ಕೂಡಿ ಬರಲಿದೆ.

ಮೀನ : ಮಕ್ಕಳ ಭವಿಷ್ಯದ ಕುರಿತಂತೆ ಅತಿಯಾದ ಭಯವು ನಿಮ್ಮನ್ನು ಕಾಡಲಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣುವಿರಿ. ಕುಟುಂಬ ಸಮೇತ ತೀರ್ಥ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸುವಿರಿ. ಸಾರ್ವಜನಿಕ ಸ್ಥಳಗಳಲ್ಲಿ ನಾಲಗೆ ಹಿಡಿತದಲ್ಲಿ ಇರಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...