alex Certify ಜನರಲ್ ಬಿಪಿನ್ ರಾವತ್ ಅವರಿಗೆ ಸುಂದರವಾದ ಕಟ್-ಔಟ್ ಎಲೆಯ ಕಲೆಯೊಂದಿಗೆ ಕಲಾವಿದರಿಂದ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರಲ್ ಬಿಪಿನ್ ರಾವತ್ ಅವರಿಗೆ ಸುಂದರವಾದ ಕಟ್-ಔಟ್ ಎಲೆಯ ಕಲೆಯೊಂದಿಗೆ ಕಲಾವಿದರಿಂದ ಗೌರವ

Artist Pays Tribute To India's First CDS, Gen Bipin Rawat, With Elegant Leaf  Art | Watchತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು 12 ರಕ್ಷಣಾ ಸಿಬ್ಬಂದಿಗಳ ದುರಂತ ಸಾವಿಗೆ ದೇಶ ಕಂಬನಿ ಮಿಡಿದಿದೆ.

ನವೆಂಬರ್ 8 ರಂದು Mi-17V5 ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನ ಪತನದಿಂದ ದೇಶದ ರಕ್ಷಣಾ ಮುಖ್ಯಸ್ಥರು ಅಮರರಾಗಿದ್ದಾರೆ. ಪ್ರಧಾನಿ, ರಾಷ್ಟ್ರಪತಿ, ಉನ್ನತಾಧಿಕಾರಿಗಳು, ಸೇರಿದಂತೆ ಹಲವಾರು ಮಂದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅಂತಹ ಅನೇಕ ಗೌರವಗಳ ನಡುವೆ, ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಿಗೆ ಹರಿದುಬಂದ ವಿಶಿಷ್ಟ ಕಲಾಕೃತಿಯೊಂದನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ನಟ ಅನುಪಮ್ ಖೇರ್ ಮತ್ತು ಐಪಿಎಸ್ ಅಧಿಕಾರಿ ಎಚ್ಜಿಎಸ್ ಧಲಿವಾಲ್ ಅವರು ಹಂಚಿಕೊಂಡಿದ್ದಾರೆ. ಶಶಿ ಅಡ್ಕರ್ ಎಂಬ ಕಲಾವಿದ, ಸಿಡಿಎಸ್ ರಾವತ್ ಅವರ ಭಾವಚಿತ್ರವನ್ನು ಎಲೆಯಲ್ಲಿ ಬಹಳ ಸ್ಪಷ್ಟವಾಗಿ ಕತ್ತರಿಸಿದ್ದಾರೆ. ಅವರು ಇದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಪೋಸ್ಟ್ ಮಾಡಿರುವ ವಿಡಿಯೋಗೆ 26.9 ಸಾವಿರ ಲೈಕ್‌ಗಳು ಮತ್ತು 3,300 ಕ್ಕೂ ಹೆಚ್ಚು ರೀಟ್ವೀಟ್‌ಗಳು ಬಂದಿವೆ.

— Ashwini Vaishnaw (मोदी का परिवार) (@AshwiniVaishnaw) December 9, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...