alex Certify ಅನು ಕಪೂರ್ ಹಳೆ ಜಾಹೀರಾತು ನೋಡಿ ಬೇಸ್ತುಬಿದ್ದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನು ಕಪೂರ್ ಹಳೆ ಜಾಹೀರಾತು ನೋಡಿ ಬೇಸ್ತುಬಿದ್ದ ಜನ…!

ನಾವು ಜೀವನದಲ್ಲಿ ಅನೇಕ ಬಗೆಯ ಜಾಹೀರಾತುಗಳನ್ನು ನೋಡಿದ್ದೇವೆ. ಕೆಲವೊಂದು ಅರ್ಥಗರ್ಭಿತವಾಗಿರುತ್ತವೆ. ಇನ್ನೂ ಕೆಲವು ಹೃದಯಸ್ಪರ್ಶಿಯಾಗಿರುತ್ತವೆ. ಮತ್ತೆ ಕೆಲವು ನಿಮ್ಮನ್ನು ಆಶ್ಚರ್ಯಗೊಳ್ಳುವಂತೆ ಮಾಡುತ್ತವೆ. ಇದೇ ರೀತಿಯ ಹಳೆಯ ಜಾಹೀರಾತೊಂದು ಇಂಟರ್ನೆಟ್ ಭಾರೀ ಸದ್ದು ಮಾಡುತ್ತಿದೆ.

ಖ್ಯಾತ ನಟ, ನಿರೂಪಕ ಅನು ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಈ ಜಾಹೀರಾತು ಆರಂಭದಲ್ಲಿ ನಿಮ್ಮ ಹೃದಯವನ್ನು ತಟ್ಟಿದರೆ ಅಂತ್ಯದಲ್ಲಿ ನಿಮಗೆ ಆಶ್ಚರ್ಯವನ್ನು ತರುತ್ತದೆ.

ಈ ಜಾಹೀರಾತಿನ ತುಣುಕನ್ನು ಗಿನಾ ಖೋಲ್ಕರ್ ಎಂಬುವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅನು ಕಪೂರ್ ಆರಂಭದಲ್ಲಿ ಮಗುವನ್ನು ದತ್ತು ಪಡೆದುಕೊಳ್ಳುವುದರ ಸಾರ್ಥಕತೆಯ ಬಗ್ಗೆ ಮಾತನಾಡುತ್ತಾರೆ. ಈ ದೃಶ್ಯವನ್ನು ನೋಡಿದಾಕ್ಷಣ ಎಂತಹವರಿಗೂ ಹೃದಯ ತುಂಬಿ ಬರುವಂತಾಗುತ್ತದೆ. ಮಗುವನ್ನು ದತ್ತು ಪಡೆಯುವುದರಿಂದ ಆ ಮಗುವಿನ ಜೀವನದಲ್ಲಿ ಬದಲಾವಣೆ ತರಬಹುದು ಎಂದು ಹೇಳುತ್ತಾರೆ.

ಆದರೆ, ಆಶ್ಚರ್ಯ ಇರುವುದು ಮುಂದೆ. ಅನು ಕಪೂರ್ ಮಗುವಿನ ದತ್ತು ಪಡೆಯುವ ಬಗ್ಗೆ ಹೇಳುತ್ತಾ ಹೇಳುತ್ತಲೇ ಪಾನ್-ಮಸಾಲ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. `ರಾಜಶ್ರೀ ಪಾನ್ ಮಸಾಲ, ಸ್ವಾದ್ ಮೇ ಸೋಚ್ ಹೈ’ ಎಂದು ಹೇಳುತ್ತಾರೆ.

ಜಾಹೀರಾತಿನಲ್ಲಿ ಮೂಡಿಬರುವ ಈ ಅನಿರೀಕ್ಷಿತ ಟ್ವಿಸ್ಟ್ ಅನ್ನು ಕಂಡ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅಯ್ಯೋ ದೇವರೇ, ಅನು ಕಪೂರ್ ಯಾವುದೋ ಒಂದು ಎನ್ ಜಿ ಒ ಅಥವಾ ಸರ್ಕಾರದ ದತ್ತು ಯೋಜನೆ ಬಗ್ಗೆ ಜಾಹೀರಾತು ಇದು ಎಂದು ನಾನು ಭಾವಿಸಿದ್ದೆ. ಆದರೆ, ಇದ್ದಕ್ಕಿದ್ದಂತೆಯೇ ಪಾನ್ ಮಸಾಲ ಬಗ್ಗೆ ಹೇಳಿದ್ದನ್ನು ನೋಡಿ ನಾನು ದಂಗಾದೆ ಎಂಬ ರೀತಿಯಲ್ಲಿ ಅನೇಕ ನೆಟ್ಟಿಗರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...