alex Certify ರಾತ್ರಿ ಪ್ರಿಯಕರನೊಂದಿಗಿದ್ದ ಪುತ್ರಿಯನ್ನು ಕಂಡು ಕೆಂಡಾಮಂಡಲವಾದ ತಂದೆಯಿಂದ ಬೆಚ್ಚಿಬೀಳಿಸುವ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಪ್ರಿಯಕರನೊಂದಿಗಿದ್ದ ಪುತ್ರಿಯನ್ನು ಕಂಡು ಕೆಂಡಾಮಂಡಲವಾದ ತಂದೆಯಿಂದ ಬೆಚ್ಚಿಬೀಳಿಸುವ ಕೃತ್ಯ

ಚಿತ್ತೂರು: ಆಂಧ್ರ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳ ಗೆಳೆಯನನ್ನು ಕೊಲೆ ಮಾಡಿ ಕೊಡಲಿಯಿಂದ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾನೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಾಲಮನೇರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪೆಂಗರಗುಂಟಾ ಗ್ರಾಮದ 23 ವರ್ಷದ ಧನಶೇಖರ್ ಕೊಲೆಯಾದ ಯುವಕ. ಐದು ದಿನಗಳ ಹಿಂದೆ ಧನಶೇಖರ್ ನಾಪತ್ತೆಯಾಗಿದ್ದು, ಆತನ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದರು. ಎಲ್ಲಿಯೂ ಪತ್ತೆಯಾಗದ ಕಾರಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು ಧನಶೇಖರನನ್ನು ಪತ್ತೆಹಚ್ಚಲು ಕ್ರಮಕೈಗೊಂಡಿದ್ದಾರೆ.

ಈ ವೇಳೆ ಆತ ತನ್ನ ಗ್ರಾಮದ ಬಾಲಕಿಯೊಂದಿಗೆ ಸಂಬಂಧ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಧನಶೇಖರ್ ನಾಪತ್ತೆಯಾಗುವಲ್ಲಿ ಹುಡುಗಿಯ ಸಂಬಂಧಿಕರು ಭಾಗಿಯಾಗಿರುವ ಬಗ್ಗೆ ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಬಾಲಕಿಯ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬಾಲಕಿಯ ತಂದೆ ಬಾಬು ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.

ಮೇ 22 ರಂದು ರಾತ್ರಿ ಮಗಳು ಮತ್ತು ಆಕೆಯ ಗೆಳೆಯರ ಧನಶೇಖರ ಒಟ್ಟಿಗೆ ಇರುವುದನ್ನು ಕಂಡು ಕೆಂಡಾಮಂಡಲವಾಗಿದ್ದ ಬಾಬು ಧನಶೇಖರನನ್ನು ಕೊಂದು ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಎಸೆದಿದ್ದಾನೆ. ಮರುದಿನ ಮೃತದೇಹ ಬಾವಿಯಲ್ಲಿ ತೇಲಿ ಬರುತ್ತಿರುವುದನ್ನು ಗಮನಿಸಿದ ಅಲ್ಲಿಂದ ಹೊರಗೆ ತೆಗೆದು ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿ ಯುವಕನ ಕುಟುಂಬದವರಿಗೆ ಸೇರಿದ ಹೊಲದಲ್ಲಿ ಹೂತು ಹಾಕಿದ್ದಾನೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಾಬುನನ್ನು ಬಂಧಿಸಿ, ಮೃತದೇಹದ ತುಂಡುಗಳನ್ನು ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...