alex Certify ಕೇಂದ್ರ ಸಚಿವ ಗಡ್ಕರಿಯವರಿಗೆ ಉದ್ಯಮಿ ಆನಂದ್‌ ಮಹೀಂದ್ರಾ ನೀಡಿದ್ದಾರೆ ಈ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸಚಿವ ಗಡ್ಕರಿಯವರಿಗೆ ಉದ್ಯಮಿ ಆನಂದ್‌ ಮಹೀಂದ್ರಾ ನೀಡಿದ್ದಾರೆ ಈ ಸಲಹೆ

ಉದ್ಯಮಿ ಆನಂದ್ ಮಹೀಂದ್ರಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಶೇಷವಾದ ಮನವಿ ಮಾಡಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಳಿಂದ ಕೂಡಿದ ಸುಂದರವಾದ ರಸ್ತೆಯ ವಿಡಿಯೊವನ್ನು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

ಆ ವಿಡಿಯೋ ಕ್ಲಿಪ್ ಹಂಚಿಕೊಳ್ಳುವಾಗ, ಹೊಸ ಗ್ರಾಮೀಣ ರಸ್ತೆಗಳಲ್ಲಿಯೂ ಅದೇ ರೀತಿಯಲ್ಲಿ ಮರಗಳನ್ನು ನೆಡುವಂತೆ ಅವರು ನಿತಿನ್ ಗಡ್ಕರಿ ಅವರನ್ನು ವಿನಂತಿಸಿದ್ದಾರೆ.

ಚಿಕ್ಕ ವಿಡಿಯೋ ಕ್ಲಿಪ್‌ನಲ್ಲಿ ಎರಡು ಬದಿಗಳಲ್ಲಿ ಮರಗಳಿಂದ ಕೂಡಿದ ರಸ್ತೆಯ ಅದ್ಭುತ ನೋಟವನ್ನು ಒಳಗೊಂಡಿದೆ. ದೂರದಿಂದ ರಸ್ತೆ ಸುರಂಗದಂತೆ ಕಾಣುತ್ತದೆ.

ಮಹೀಂದ್ರಾ ಅದಕ್ಕೆ ಒಂದು ಹೆಸರನ್ನು ಸಹ ನೀಡಿದ್ದು, “ಟ್ರನಲ್” ಎಂದು ಕರೆದಿದ್ದಾರೆ (ಟ್ರೀ ಪ್ಲಸ್ ಟನಲ್), ಇದು ಮರಗಳು ಮತ್ತು ಸುರಂಗ ಪದಗಳ ಸಂಯೋಜನೆಯಾಗಿದೆ.

ನೀವು ನಿರ್ಮಿಸುತ್ತಿರುವ ಹೊಸ ಗ್ರಾಮೀಣ ರಸ್ತೆಗಳಲ್ಲಿ ಈ ಕೆಲವು ಸುರಂಗಗಳನ್ನು ಯೋಜಿಸಬಹುದೇ? ಎಂದು ಆನಂದ್ ಮಹೀಂದ್ರಾ ಕೇಂದ್ರ ಸಚಿವರನ್ನು ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...