alex Certify ಬುಲೆಟ್ ​ಪ್ರೂಫ್​ ಶೀಲ್ಡ್​​ ಕಳಚಿ ಜನತೆ ಮುಂದೆ ನಿಂತ ಕೇಂದ್ರ ಸಚಿವ ಅಮಿತ್​ ಶಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುಲೆಟ್ ​ಪ್ರೂಫ್​ ಶೀಲ್ಡ್​​ ಕಳಚಿ ಜನತೆ ಮುಂದೆ ನಿಂತ ಕೇಂದ್ರ ಸಚಿವ ಅಮಿತ್​ ಶಾ..!

ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್​ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ ಗೃಹ ಸಚಿವ ಅಮಿತ್​ ಶಾ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಶೇರ್​ -ಇ- ಕಾಶ್ಮೀರ್ ಅಂತಾರಾಷ್ಟ್ರೀಯ ಕನ್ವೆನ್ಶನ್​ ಕೇಂದ್ರದಲ್ಲಿ ಭಾಷಣ ಮಾಡುವ ಮುನ್ನ ಬುಲೆಟ್​ ಪ್ರೂಫ್​ ಶೀಲ್ಡ್​ನ್ನು ತೆಗೆಯುವ ಮೂಲಕ ಅಮಿತ್​ ಶಾ ಎಲ್ಲರ ಗಮನ ಸೆಳೆದಿದ್ದಾರೆ.

ನನ್ನನ್ನು ನಿಂದಿಸಲಾಯಿತು, ಖಂಡಿಸಲಾಯಿತು, ಇಂದು ನಿಮ್ಮೆಲ್ಲರೊಂದಿಗೆ ನಾನು ಪ್ರಾಮಾಣಿಕವಾಗಿ ಮಾತನಾಡಲು ಇಚ್ಛಿಸುತ್ತೇನೆ. ಇದೇ ಕಾರಣಕ್ಕೆ ನಾನು ಬುಲೆಟ್​ ಪ್ರೂಫ್​ ಶೀಲ್ಡ್​ನ್ನು ತೆಗೆದು ಹಾಕಿದ್ದೇನೆ. ಫಾರೂಕ್​ ಸಾಬ್​ ನನಗೆ ಪಾಕಿಸ್ತಾನದವರ ಜೊತೆ ಮಾತನಾಡಿ ಎಂದು ಸಲಹೆ ನೀಡಿದ್ದರು. ಆದರೆ ನಾನು ಕಣಿವೆ ರಾಜ್ಯದ ಜನರು ಹಾಗೂ ಯುವಕರೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಅಮಿತ್​ ಶಾ ಹೇಳಿದ್ದಾರೆ. ಜಮ್ಮು – ಕಾಶ್ಮೀರದಲ್ಲಿ ಗೃಹ ಸಚಿವ ಅಮಿತ್​ ಶಾರ ಮೂರನೇ ದಿನದ ಪ್ರವಾಸ ಇದಾಗಿದೆ.‌

ಇನ್ನು ಇತ್ತ ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿದ್ದು ಆಯುಶ್ಮಾನ್​ ಭಾರತ್​ ಹೆಲ್ತ್​ ಇನ್​ಫ್ರಾಸ್ಟಕ್ಚರ್​​​ ಮಿಷನ್​​ ಅನಾವರಣಗೊಳಿಸಿದ್ದಾರೆ. ಇದರ ಜೊತೆಯಲ್ಲಿ ಉತ್ತರ ಪ್ರದೇಶದಲ್ಲಿ 9 ಮೆಡಿಕಲ್​ ಕಾಲೇಜುಗಳ ಉದ್ಘಾಟನೆಯನ್ನೂ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...