ಮಂಗಳೂರು : ಅಕ್ರಮ ಸಂಬಂಧದ ಆರೋಪಕ್ಕೆ ಮನನೊಂದು ಮೊಬೈಲ್ ‘LIVE’ ನಲ್ಲೇ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಟ್ಟತ್ತಾರಿನಲ್ಲಿ ನಡೆದಿದೆ.
ಅಬ್ದುಲ್ ನಾಸೀರ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಘಟನೆ
ಅಬ್ದುಲ್ ನಾಸೀರ್ ಎಂಬ ಯುವಕ ಇಲ್ಲಿನ ಅದ್ರಾಮ ಎಂಬುವವರ ಮನೆಯೊಂದರಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಆ ಮನೆಯ ಯುವತಿಯ ಜೊತೆ ಅಕ್ರಮ ಸಂಬಂಧವಿದೆ ಎಂದು ಹಬ್ಬಿಸಲಾಗುತ್ತದೆ. ಈ ವಿಚಾರ ತಿಳಿದು ಮನೆಯವರು ಅಬ್ದುಲ್ ನಾಸೀರ್ ಮೇಲೆ ಹಲ್ಲೆ ನಡೆಸುತ್ತಾರೆ. ಈ ವಿಚಾರಕ್ಕೆ ಮನನೊಂದು ಅಬ್ದುಲ್ ನಾಸೀರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನನ್ನ ಸಾವಿಗೆ ಅದ್ರಾಮ ಮತ್ತು ಆತನ ಕುಟುಂಬದವರೇ ಕಾರಣ, ಹುಡುಗಿಯ ಜೊತೆ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.