ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತು ಬಿಡುಗಡೆಯಾಗುವ ವೇಳೆ ಯೋಜನೆಯ ಫಲಾನುಭವಿಗಳಿಗೆ ವಂಚನೆಯೆಸಗುವ ಅನೇಕ ನಿದರ್ಶನಗಳು ಕಂಡುಬಂದಿವೆ.
ಇಂಥ ವಂಚನೆಗಳನ್ನು ತಡೆಗಟ್ಟಲೆಂದು ಕೇಂದ್ರ ಸರ್ಕಾರವು ನೋಂದಣಿಯ ಪ್ರಕ್ರಿಯೆಯನ್ನೇ ಬದಲಿಸಿದೆ. ಈ ಬದಲಾವಣೆಗಳನ್ನು ಮಾಡುವ ಮೂಲಕ ನೀವು ವಂಚನೆಗೀಡಾಗುವುದು ತಪ್ಪಲಿದೆ.
ಮದುವೆ ಸಮಾರಂಭದಲ್ಲಿ ದಾದಿಯ ಭರ್ಜರಿ ಡಾನ್ಸ್
ಪಿಎಂ ಕಿಸಾನ್ ಯೋಜನೆಗೆ ನೋಂದಣಿಯಾಗಲು ರೇಷನ್ ಕಾರ್ಡ್ ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ. ರೇಷನ್ ಕಾರ್ಡ್ ಸಲ್ಲಿಸದೇ ಇದ್ದಲ್ಲಿ ನಿಮ್ಮ ಖಾತೆಗೆ 2000 ರೂ.ಗಳ ಕಂತಿನ ದುಡ್ಡು ಬರುವುದಿಲ್ಲ.
ಪಿಎಂ ಕಿಸಾನ್ ಪೋರ್ಟಲ್ನಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ನೋಂದಣಿ ಮಾಡಬೇಕಾಗುತ್ತದೆ. ಇದರೊಂದಿಗೆ ದಾಖಲೆಗಳ ಸಾಫ್ಟ್ ಕಾಪಿಗಳನ್ನು (ಪಿಡಿಎಫ್) ಸೃಷ್ಟಿಸಿ ಪೋರ್ಟಲ್ಗೆ ಅಪ್ಲೋಡ್ ಮಾಡಬೇಕಾಗುತ್ತದೆ.
ಲಾರಿ-ಬೈಕ್ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ದಂಪತಿ ದುರ್ಮರಣ
ಇದರೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಹಾಗೂ ಘೋಷಪತ್ರಗಳ ದೈಹಿಕ ಪ್ರತಿಗಳ ಸಲ್ಲಿಕೆಯನ್ನೂ ತೆಗೆದುಹಾಕಲಾಗಿದೆ. ಫಲಾನುಭವಿಗಳು ಈ ದಾಖಲೆಗಳ ಪಿಡಿಎಫ್ ಪ್ರತಿಗಳನ್ನು ಸೃಷ್ಟಿಸಿ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕಿದೆ. ಇದರಿಂದ ರೈತರ ಸಮಯ ಉಳಿಯಲಿದ್ದು, ಯೋಜನೆಯನ್ನು ಇನ್ನಷ್ಟು ಪಾರದರ್ಶಕ ಮಾಡಲು ಅನುವಾಗುತ್ತದೆ.
ಪ್ರತಿಯೊಬ್ಬ ಫಲಾನುಭವಿ ರೈತನಿಗೂ ವಾರ್ಷಿಕ 6,000 ರೂಗಳ ನೆರವಿನ ಧನ ನೀಡುವ ಕಿಸಾನ್ ಸಮ್ಮಾನ್ ಯೋಜನೆಯ 9 ಕಂತುಗಳ ಪಾವತಿ ಅದಾಗಲೇ ಆಗಿದೆ. ಡಿಸೆಂಬರ್ 15ರದು ಯೋಜನೆಯ 10ನೇ ಕಂತಿನ ದುಡ್ಡನ್ನು ರೈತರ ಖಾತೆಗಳಿಗೆ ಕೇಂದ್ರ ಸರ್ಕಾರ ಜಮಾ ಮಾಡಲಿದೆ.
ಯೋಜನೆಯ ಪ್ರಯೋಜನವನ್ನು ಅದಾಗಲೇ 11.37 ಕೋಟಿ ರೈತರು ಪಡೆದುಕೊಂಡಿದ್ದು, ಇದಕ್ಕಾಗಿ ಸರ್ಕಾರ 1.58 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿದೆ.