alex Certify ಕೋವಿಡ್​ ನಿಯಮದೊಂದಿಗೆ ಅಜ್ಮೀರ್​ ಷರೀಫ್​ ದರ್ಗಾಗೆ ಪ್ರವೇಶ ಮುಕ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ನಿಯಮದೊಂದಿಗೆ ಅಜ್ಮೀರ್​ ಷರೀಫ್​ ದರ್ಗಾಗೆ ಪ್ರವೇಶ ಮುಕ್ತ

ರಾಜಸ್ಥಾನ ಸರ್ಕಾರವು ಧಾರ್ಮಿಕ ಸ್ಥಳಗಳನ್ನ ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಸೋಮವಾರ ಪ್ರಸಿದ್ಧ ಅಜ್ಮೀರ್​ ಷರೀಫ್​ ದರ್ಗಾಗೆ ಆಗಮಿಸಿದ ಭಕ್ತರು ಕೋವಿಡ್​ ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ರು.

ಕೊರೊನಾ ಎರಡನೆ ಅಲೆಯ ಭೀಕರತೆ ಹೆಚ್ಚಾದ ಬಳಿಕ ದರ್ಗಾವನ್ನ ಏಪ್ರಿಲ್​ 15ನೇ ತಾರೀಖಿನಂದು ಬಂದ್​ ಮಾಡಲಾಗಿತ್ತು.

ಸರ್ಕಾರದ ಆದೇಶದಂತೆ ದರ್ಗಾದಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದರೂ ಸಹ ದರ್ಗಾದಲ್ಲಿ ಚಾದರ್​ ಹಾಗೂ ಹೂವುಗಳನ್ನ ಅರ್ಪಿಸಲು ನಿರ್ಬಂಧ ಹೇರಲಾಗಿದೆ ಎಂದು ಖ್ವಾಜಾ ಗರಿಬ್​ ನವಾಬ್​ ಹೇಳಿದ್ದಾರೆ.

ಭಕ್ತಾದಿಗಳ ಸಂಖ್ಯೆಯ ಮೇಲೆಯೇ ಅಜ್ಮೀರ್​ ಷರೀಫ್​ ದರ್ಗಾದ ಆರ್ಥಿಕತೆಯು ಅವಲಂಬಿತವಾಗಿದೆ. ಲಾಕ್​ಡೌನ್​ ಹಾಗೂ ಕೊರೊನಾ ಸಂಬಂಧಿ ನಿರ್ಬಂಧಗಳಿಂದಾಗಿ ಕಳೆದ ಎರಡು ತಿಂಗಳು ದರ್ಗಾಗೆ ಯಾವುದೇ ಪ್ರವಾಸಿಗರು ಭೇಟಿ ನೀಡಿರಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...