alex Certify ಮಹೀಂದ್ರಾ ಜಾಹೀರಾತು ಚಿತ್ರೀಕರಣದ ವೇಳೆ ಸಿಟ್ಟು ಮಾಡಿಕೊಂಡ್ರಾ ಅಜಯ್ ದೇವಗನ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೀಂದ್ರಾ ಜಾಹೀರಾತು ಚಿತ್ರೀಕರಣದ ವೇಳೆ ಸಿಟ್ಟು ಮಾಡಿಕೊಂಡ್ರಾ ಅಜಯ್ ದೇವಗನ್…?

ಮಹೀಂದ್ರಾ ಗ್ರೂಪ್‌ನಿಂದ ಪ್ರಚಾರದ ಸಾಹಸವು ಟ್ವಿಟ್ಟರ್ ಬಳಕೆದಾರರನ್ನು ಸಂಪೂರ್ಣವಾಗಿ ರಂಜಿಸಿದೆ. ವಿಶೇಷವಾಗಿ, ಇದರಲ್ಲಿ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ತೊಡಗಿಸಿಕೊಂಡ ನಂತರ ತಮಾಷೆಮಯವಾಗಿದೆ. ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಕೈಗಾರಿಕೋದ್ಯಮಿ, ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

ಮಹೀಂದ್ರಾ ಟ್ರಕ್ ಮತ್ತು ಬಸ್ ನ ರಾಯಭಾರಿ ಅಜಯ್ ದೇವಗನ್ ಅವರನ್ನು ಒಳಗೊಂಡ ವಿಡಿಯೋವನ್ನು ಉದ್ಯಮಿ ಹಂಚಿಕೊಂಡಿದ್ದಾರೆ. ಕಂಪನಿಯ ಜಾಹೀರಾತನ್ನು ಚಿತ್ರೀಕರಿಸುವಾಗ ಅಜಯ್ ದೇವಗನ್ ಸಿಟ್ಟಿಗೆದ್ದಂತೆ ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ಪ್ಲೇ ಮಾಡಲಾಗಿದೆ.

ಸ್ಕ್ರಿಪ್ಟ್ ಏಕೆ ನಿರಂತರವಾಗಿ ಬದಲಾಗುತ್ತಿದೆ..? ಎಂದು ಸಿಟ್ಟಾಗಿ ಅಜಯ್ ದೇವಗನ್ ಕೇಳಿದ್ದಾರೆ. ಸ್ಕ್ರಿಪ್ಟ್ ಅನ್ನು ಕೇವಲ ನಾಲ್ಕು ಬಾರಿ ಮಾತ್ರ ಬದಲಾಯಿಸಲಾಗಿದೆ ಎಂದು ತೆರೆಯ ಹಿಂದಿರುವವರು ಉತ್ತರಿಸಿದ್ದಾರೆ. ಇದಕ್ಕೆ ನಟ ನಿರಾಸೆಯ ನಿಟ್ಟುಸಿರುಬಿಟ್ಟಿದ್ದರೆ.

ಟ್ವಿಟ್ಟರ್‌ನಲ್ಲಿ ಈ ಕಿರು ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ, ಮಹೀಂದ್ರಾ ಟ್ರಕ್‌ ಬಸ್ ನ ಜಾಹೀರಾತು ಚಿತ್ರೀಕರಣದಲ್ಲಿ ಅಜಯ್ ದೇವಗನ್ ತಮ್ಮ ಶಾಂತತೆಯನ್ನು ಕಳೆದುಕೊಂಡಿದ್ದಾರೆ ಎಂಬುದು ತಿಳಿಯಿತು. ಅವರು ನಮ್ಮ ಟ್ರಕ್‌ನಲ್ಲಿ ತನ್ನ ಹಿಂದೆ ಬರುವ ಮೊದಲು ನಾನು ಪಟ್ಟಣವನ್ನು ತೊರೆಯುವುದು ಉತ್ತಮ ಎಂದು ತಮಾಷೆಯಾಗಿ ಬರೆದಿದ್ದಾರೆ.

ಮಹೀಂದ್ರಾ ಅವರ ಟ್ವೀಟ್ ಅನೇಕರನ್ನು ರಂಜಿಸಿದ್ದು, ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಾವಿರಾರು ಲೈಕ್‌ಗಳನ್ನು ಗಳಿಸಿದೆ.

ಅವರು ಎರಡು ಟ್ರಕ್‌ಗಳಲ್ಲಿ ಬರುತ್ತಾರೆ. ನಟನ ಸಾಹಸಗಳ ಬಗ್ಗೆ ನಿಮಗೆ ತಿಳಿದಿಲ್ಲ ಎಂದು ತಾನು ಭಾವಿಸುತ್ತೇನೆ ಅಂತಾ ಟ್ವಿಟ್ಟರ್ ಬಳಕೆದಾರರೊಬ್ಬರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

— anand mahindra (@anandmahindra) February 14, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...