alex Certify ಪತ್ನಿ ಮನೆಗೆ ಬರಲು ಒಪ್ಪಲಿಲ್ಲವೆಂದು ನಾದಿನಿ ಜತೆ ಪತಿ ಪರಾರಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಮನೆಗೆ ಬರಲು ಒಪ್ಪಲಿಲ್ಲವೆಂದು ನಾದಿನಿ ಜತೆ ಪತಿ ಪರಾರಿ…..!

ಪಾಟ್ನಾ: ಪತ್ನಿಯು ತನ್ನೊಂದಿಗೆ ಮನೆಗೆ ಬರಲು ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ನಾದಿನಿಯ ಜತೆಗೆ ಪರಾರಿಯಾಗಿದ್ದಾನೆ. ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಕೃಷ್ಣ ರಾಮ್ ಎಂಬ ಈ ವ್ಯಕ್ತಿ ಪತ್ನಿ ಸಂಕಂಟಿ ದೇವಿಯನ್ನು ಕರೆತರಲು ತನ್ನ ಮಾವನ ಮನೆಗೆ ಹೋಗಿದ್ದ. ಆದರೆ, ಒಕೆ ಬರಲು ಒಪ್ಪಲಿಲ್ಲ. ಬಳಿಕ ಈ ವ್ಯಕ್ತಿ ತನ್ನ ನಾದಿನಿಗೆ ಆಮಿಷವೊಡ್ಡಿ ಆಕೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡಿದವನಿಗೆ ಕಾದಿತ್ತು ಈ ಶಿಕ್ಷೆ

ಆಕೆ ಅಪ್ರಾಪ್ತೆಯಾಗಿದ್ದು, ಬಾಲಕಿಯ ತಂದೆ ತಕ್ಷಣವೇ ರಾಮ್ ವಿರುದ್ಧ ಅಪಹರಣದ ದೂರು ನೀಡಿದ್ದಾರೆ. ಆದರೆ, ಈ ದೂರು ಮಹಿಳಾ ಸಹಾಯವಾಣಿಗೆ ತಲುಪುವ ಹೊತ್ತಿಗೆ, ತನ್ನ ಕುಟುಂಬಸ್ಥರೇ ತನಗೆ ಬಾಲ್ಯವಿವಾಹಕ್ಕೆ ಏರ್ಪಾಟು ಮಾಡಿರುವ ಕುರಿತು ಆಕೆ ದೂರು ನೀಡಿದ್ದಳು. ಆದರೆ, ಪೊಲೀಸರು ಈ ಇಬ್ಬರನ್ನೂ ಪತ್ತೆ ಹಚ್ಚಿ ವಿಚಾರಿಸಿದಾಗ, ರಾಮ್ ತನ್ನ ನಾದಿನಿಯನ್ನು ಮಹಿಳಾ ಸಹಾಯವಾಣಿಗೆ ಕರೆದೊಯ್ದು ಸುಳ್ಳು ದೂರು ಕೊಡಿಸಿದ್ದು ಗೊತ್ತಾಗಿದೆ.

ಬಳಿಕ, ಅಪ್ರಾಪ್ತೆಯನ್ನು ಅಪಹರಿಸಿರುವ ಆರೋಪಿ ರಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಕುಟುಂಬಸ್ಥರು ತನಗೆ ಬಲವಂತವಾಗಿ ಮದುವೆ ಮಾಡಲು ಪ್ರಯತ್ನಿಸುತ್ತಿದ್ದ ಕಾರಣದಿಂದಲೇ ತಾನು ರಕ್ಷಣೆಗಾಗಿ ರಾಮ್ ಜತೆಗೆ ಬಂದಿರುವುದಾಗಿ ಈ ಬಾಲಕಿ ಹೇಳುತ್ತಿದ್ದಾಳೆ.

ದೇವಿಯನ್ನು ರಾಮ್ 12 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಪತಿಯಿಂದ ತೊಂದರೆಯಾಗುತ್ತಿದ್ದ ಕಾರಣ ಆಕೆ ತವರಿಗೆ ಮರಳಿದ್ದಳು. ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...