alex Certify ‘ಜನರು ಲಸಿಕೆ ಪಡೆಯಬೇಕು ಅಂದರೆ ಸಲ್ಮಾನ್​ ಖಾನ್​​ ಪ್ರೇರೇಪಿಸಬೇಕು’ : ಪಾಲಿಕೆ ಮೇಯರ್​ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜನರು ಲಸಿಕೆ ಪಡೆಯಬೇಕು ಅಂದರೆ ಸಲ್ಮಾನ್​ ಖಾನ್​​ ಪ್ರೇರೇಪಿಸಬೇಕು’ : ಪಾಲಿಕೆ ಮೇಯರ್​ ಹೇಳಿಕೆ

ಕೋವಿಡ್​ 19 ಲಸಿಕೆ ಅಭಿಯಾನದ ಕುರಿತಂತೆ ಮುಸ್ಲಿಮರಲ್ಲಿ ಇರುವ ಧಾರ್ಮಿಕ ಆತಂಕಗಳ ವಿಚಾರವಾಗಿ ಮುಂಬೈ ಮೇಯರ್​ ಕಿಶೋರಿ ಪೆಡ್ನೇಕರ್​ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಲ್ಮಾನ್​ ಖಾನ್​​ರಂತಹ ವ್ಯಕ್ತಿಗಳು ಮುಸ್ಲಿಮರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.

ಕೋವಿಡ್​ ಲಸಿಕೆ ವಿಚಾರದಲ್ಲಿ ಮುಸ್ಲಿಮರಿಗೆ ಧಾರ್ಮಿಕ ಆತಂಕಗಳಿವೆ. ಇದೇ ಕಾರಣಕ್ಕಾಗಿ ಲಸಿಕೆ ಸ್ವಲ್ಪ ಮಂದಗತಿಯಲ್ಲಿ ಸಾಗಿತ್ತು. ಆದರೆ ಈಗ ಮುಸ್ಲಿಮರು ಲಸಿಕೆ ಸ್ವೀಕರಿಸುತ್ತಿದ್ದಾರೆ. ಅವರು ಇನ್ನಷ್ಟು ಲಸಿಕೆ ತೆಗೆದುಕೊಳ್ಳಲು ಮುಂದೆ ಬರಬೇಕು ಅಂದರೆ ಸಲ್ಮಾನ್​ ಖಾನ್​ರಂತಹ ನಟರು ಅವರನ್ನು ಪ್ರೋತ್ಸಾಹಿಸಬೇಕು ಎಂದು ಕಿಶೋರಿ ಪೆಡ್ನೇಕರ್​ ಹೇಳಿದ್ದಾರೆ.

ಬೆಳಗ್ಗೆಯಷ್ಟೇ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಕೋವಿಡ್​ 19 ಲಸಿಕೆ ಕುರಿತಂತೆ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು ಧಾರ್ಮಿಕ ಮುಖಂಡರು ಹಾಗೂ ಸಲ್ಮಾನ್​ ಖಾನ್​ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದರು.

ಹೆಚ್ಚಿನ ಜನರನ್ನು ಲಸಿಕೆಯತ್ತ ಆಕರ್ಷಿಸುವ ಸಲುವಾಗಿ ನಾವು ಧಾರ್ಮಿಕ ಮುಖಂಡರು ಹಾಗೂ ಸೆಲೆಬ್ರಿಟಿಗಳ ಮೂಲಕ ಲಸಿಕೆ ಜಾಗೃತಿ ಮೂಡಿಸಲು ಇಚ್ಛಿಸಿದ್ದೇವೆ. ಸಲ್ಮಾನ್​ ಖಾನ್​ರಂತಹ ಸೆಲೆಬ್ರಿಟಿಗಳು ಈ ಜಾಗೃತಿ ಅಭಿಯಾನದ ಪಾಲುದಾರರಾಗಲಿ ಎಂದು ಮಾತುಕತೆ ನಡೆಸುತ್ತಿದ್ದೇವೆ ಅಂತಾ ರಾಜೇಶ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...