alex Certify ಈ ರಾಶಿಯವರಿಗೆ ಇಂದು ದೊರೆಯಲಿದೆ ಸಮಾಜದಲ್ಲಿ ಗೌರವ ಮತ್ತು ಯಶಸ್ಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ದೊರೆಯಲಿದೆ ಸಮಾಜದಲ್ಲಿ ಗೌರವ ಮತ್ತು ಯಶಸ್ಸು

ಮೇಷ ರಾಶಿ 
ಇವತ್ತು  ನಿಮಗೆ ಆಯಾಸ ಮತ್ತು ಆಲಸ್ಯದ ಅನುಭವವಾಗಲಿದೆ. ಹೆಚ್ಚು ಕೋಪ ಕೂಡ ಬರಬಹುದು. ಚಿಕ್ಕ- ಚಿಕ್ಕ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುತ್ತೀರಿ. ನೌಕರಿ, ವ್ಯಾಪಾರ ಕ್ಷೇತ್ರ ಅಥವಾ ಕುಟುಂಬದಲ್ಲಿ ನಿಮ್ಮಿಂದ ಯಾರಿಗೂ ದುಃಖ ಉಂಟಾಗದಂತೆ ಎಚ್ಚರ ವಹಿಸಿ.

ವೃಷಭ ರಾಶಿ

ಕುಟುಂಬದವರೊಂದಿಗೆ ಸಮಯ ಕಳೆಯುತ್ತೀರಿ. ಅವಶ್ಯ ಕಾರ್ಯಕ್ಕಾಗಿ ಖರ್ಚು ಮಾಡಲಿದ್ದೀರಿ. ಈ ದಿನ ನಿಮಗೆ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಇವತ್ತು ಕಚೇರಿಯಲ್ಲೂ ಉತ್ತಮ ವಾತಾವರಣ ಸಿಗಲಿದೆ.

ಮಿಥುನ ರಾಶಿ

ಇವತ್ತು ನಿಮಗೆ ಅದ್ಭುತ ಮನರಂಜನೆ ಸಿಗಲಿದೆ. ನಿಮ್ಮ ಮನಸ್ಸು ಕೂಡ ಉಲ್ಲಸಿತವಾಗಿರಲಿದೆ. ಮಿತ್ರರು ಮತ್ತು ಕುಟುಂಬದವರೊಂದಿಗೆ ಖುಷಿ ಖುಷಿಯಾಗಿ ದಿನ ಕಳೆಯುತ್ತೀರಿ. ಸಮಾಜದಲ್ಲಿ ಗೌರವ ಮತ್ತು ಯಶಸ್ಸು ದೊರೆಯಲಿದೆ.

ಕರ್ಕ ರಾಶಿ

ಲಕ್ಷ್ಮಿಯ ಕೃಪೆ ನಿಮ್ಮ ಮೇಲಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ನಿಮ್ಮನ್ನು ಪ್ರಸನ್ನವಾಗಿಡಲಿದೆ. ಆತ್ಮೀಯರೊಂದಿಗಿನ ಭೇಟಿ ಖುಷಿ ಕೊಡಲಿದೆ. ಸ್ನೇಹಿತರ ಜೊತೆ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುತ್ತೀರಿ. ಯಶಸ್ಸು ಮತ್ತು ಖ್ಯಾತಿ ಹೆಚ್ಚಾಗಲಿದೆ.

ಸಿಂಹ ರಾಶಿ

ಇವತ್ತು ಹೊಸ ಕೆಲಸ ಆರಂಭಿಸಿದರೆ ಯಶಸ್ಸು ಸಿಗುತ್ತದೆ. ಉದ್ಯಮಿಗಳಿಗೆ ವಿಶೇಷ ಲಾಭ ದೊರೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲೂ ಗೌರವ ನಿಮ್ಮದಾಗಲಿದೆ. ಮಕ್ಕಳ ಜೊತೆ ಬಾಂಧವ್ಯ ಇನ್ನಷ್ಟು ಉತ್ತಮವಾಗಲಿದೆ.

ಕನ್ಯಾ ರಾಶಿ

ಕುಟುಂಬ ಸದಸ್ಯರೊಂದಿಗೆ ಸಂಘರ್ಷ ನಡೆಯುವ ಸಾಧ್ಯತೆ ಇದೆ. ತಾಯಿಯ ಆರೋಗ್ಯ ಬಿಗಡಾಯಿಸಬಹುದು. ಯಾವುದಾದ್ರೂ ದಾಖಲೆಗಳಿಗೆ ಸಹಿ ಮಾಡುವ ಮುನ್ನ ಜಾಗರೂಕರಾಗಿರಿ. ಖರ್ಚು ಹೆಚ್ಚಾಗುವ ಸಂಭವ ಇದೆ.

ತುಲಾ ರಾಶಿ

ಸಹೋದರ-ಸಹೋದರಿಯರೊಂದಿಗೆ ಸಂಬಂಧ ಸುಧಾರಿಸಲಿದೆ. ಯಾವುದಾದರೂ ಧಾರ್ಮಿಕ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಹೊಸ ಕಾರ್ಯ ಆರಂಭಿಸಲು ಶುಭ ದಿನ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ವಿರೋಧಿಗಳೆದುರು ಜಯ ಸಿಗಲಿದೆ.

ವೃಶ್ಚಿಕ ರಾಶಿ

ಮಾತಿನ ಮೇಲೆ ಸಂಯಮ ಇಟ್ಟುಕೊಂಡಲ್ಲಿ ಕುಟುಂಬದಲ್ಲಿ ಸುಖ- ಶಾಂತಿ ನೆಲೆಸಲಿದೆ. ನಕಾರಾತ್ಮಕ ಆಲೋಚನೆಗಳ ಪ್ರಾಬಲ್ಯವಿರಲಿದೆ. ಧಾರ್ಮಿಕ ಕಾರ್ಯಕ್ಕಾಗಿ ಹಣ ಖರ್ಚಾಗಲಿದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿಲ್ಲ.

ಧನು ರಾಶಿ

ಇವತ್ತು ನಿಮಗೆ ಶಾರೀರಿಕ ಅಸ್ವಸ್ಥತೆ ಮತ್ತು ಮಾನಸಿಕ ವ್ಯಾಕುಲತೆ ಕಾಡಬಹುದು. ಹಾಗಾಗಿ ಯಾವುದೇ ಹೊಸ ಕಾರ್ಯವನ್ನು ಆರಂಭಿಸುವುದು ಬೇಡ. ಊಟ-ತಿಂಡಿ ವಿಷಯದಲ್ಲಿ ವಿಶೇಷ ಗಮನಹರಿಸುವುದು ಒಳಿತು.

ಮಕರ ರಾಶಿ

ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ಕಾಗಿ ಹಣ ಖರ್ಚಾಗಲಿದೆ. ಆತ್ಮೀಯರು ಮತ್ತು ಸ್ನೇಹಿತರ ಜೊತೆ ಸಂಘರ್ಷ ನಡೆಯುವ ಸಾಧ್ಯತೆ ಇದೆ. ಧನಹಾನಿ ಮತ್ತು ಮಾನಹಾನಿಯ ಸಂಭವವೂ ಇದೆ. ಕೋರ್ಟ್ ಕಚೇರಿ ವ್ಯಾಜ್ಯಗಳಲ್ಲಿ ಯಶಸ್ಸು ಸಿಗುವುದಿಲ್ಲ.

ಕುಂಭ ರಾಶಿ

ಇವತ್ತು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಸೃಜನಾತ್ಮಕ ಕೆಲಸದಲ್ಲಿ ಆಸಕ್ತಿ ಹೊಂದಲಿದ್ದೀರಿ. ಅದರಿಂದ ಉತ್ತಮ ಪ್ರತಿಫಲವೂ ದೊರೆಯಲಿದೆ. ಮಕ್ಕಳಿಂದ ಶುಭ ಸಮಾಚಾರ ದೊರೆಯಲಿದೆ.

ಮೀನ ರಾಶಿ

ಉದ್ಯೋಗ ಅಥವಾ ವ್ಯಾಪಾರದಲ್ಲಿ ಸಫಲತೆ ಸಿಗಲಿದೆ. ಉನ್ನತ ಅಧಿಕಾರಿಗಳಿಂದ ಶಹಬ್ಬಾಸ್ ಗಿರಿ ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭ ದೊರೆಯುವ ಸಾಧ್ಯತೆ ಇದೆ. ಕುಟುಂಬದಲ್ಲೂ ಆನಂದದ ವಾತಾವರಣ ನೆಲೆಸಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...