alex Certify ಪಡಿತರದಾರರು ಸೇರಿ ದೇಶದ ಜನತೆಗೆ ಮೋದಿ 75 ನೇ ಸ್ವಾತಂತ್ರ್ಯೋತ್ಸವ ಗಿಫ್ಟ್: 6 ಪ್ರಮುಖ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರದಾರರು ಸೇರಿ ದೇಶದ ಜನತೆಗೆ ಮೋದಿ 75 ನೇ ಸ್ವಾತಂತ್ರ್ಯೋತ್ಸವ ಗಿಫ್ಟ್: 6 ಪ್ರಮುಖ ಘೋಷಣೆ

ನವದೆಹಲಿ: 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು.

ಸುದೀರ್ಘ ಭಾಷಣದಲ್ಲಿ, ಪ್ರಧಾನಿ ಮೋದಿ ಕಳೆದ ಕೆಲವು ವರ್ಷಗಳಲ್ಲಿ ಆರಂಭಿಸಿದ ಆರ್ಥಿಕತೆ, ಮೂಲಸೌಕರ್ಯ, ಆತ್ಮ ನಿರ್ಭರ ಭಾರತ್ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳು ಸೇರಿದಂತೆ ವಿಶಾಲ ವ್ಯಾಪ್ತಿಯ ವಿಷಯಗಳ ಕುರಿತು ಪ್ರಸ್ತಾಪಿಸಿದರು. ಮುಂದಿನ 25 ವರ್ಷಗಳಲ್ಲಿ ಪ್ರಧಾನಿ ತಮ್ಮ ದೃಷ್ಟಿಕೋನವನ್ನು ಹೊರಹಾಕಿ ಮುಂದಿನ ದಿನಗಳಲ್ಲಿ ಅವರ ಸರ್ಕಾರ ಏನು ಮಾಡಲಿದೆ ಎಂಬ ಸುಳಿವನ್ನು ನೀಡಿದರು.

ಸಾರವರ್ಧಿತ ಅಕ್ಕಿ

ದೇಶದ ಪ್ರತಿಯೊಬ್ಬ ಬಡವರಿಗೂ ಪೌಷ್ಟಿಕಾಂಶ ನೀಡುವುದು ತನ್ನ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಬಡ ಮಹಿಳೆಯರು ಮತ್ತು ಬಡ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯು ಅವರ ಬೆಳವಣಿಗೆಯಲ್ಲಿ ಪ್ರಮುಖ ಅಡೆತಡೆಗಳನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದರು.

ಇದನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ತನ್ನ ವಿವಿಧ ಯೋಜನೆಗಳ ಅಡಿಯಲ್ಲಿ ಬಡವರಿಗೆ ನೀಡುವ ಅಕ್ಕಿಯನ್ನು ಸಾರವರ್ಧಕವಾಗಿಸಲು ನಿರ್ಧರಿಸಲಾಗಿದೆ. ಬಡವರಿಗೆ ಪೌಷ್ಟಿಕಾಂಶದೊಂದಿಗೆ ಸಾರವರ್ಧಿತ ಅಕ್ಕಿಯನ್ನು ನೀಡುತ್ತೇವೆ. ಪಡಿತರ ಅಂಗಡಿಯಲ್ಲಿ ಲಭ್ಯವಿರುವ ಅಕ್ಕಿಯಾಗಿರಲಿ, ಮಧ್ಯಾಹ್ನದ ಊಟದಲ್ಲಿ ಮಕ್ಕಳಿಗೆ ನೀಡುವ ಅಕ್ಕಿಯಾಗಿರಲಿ ಅಥವಾ ಪ್ರತಿ ಯೋಜನೆಯ ಮೂಲಕ ಲಭ್ಯವಿರುವ ಅಕ್ಕಿಯಾಗಿರಲಿ, ಅದನ್ನು 2024 ರ ವೇಳೆಗೆ ಪೋಷಕಾಂಶಯುಕ್ತ ಸಾರವರ್ಧಕ ಅಕ್ಕಿ ಬಲಪಡಿಸಲಾಗುವುದು ಎಂದು ಅವರು ಹೇಳಿದರು.

‘ಗತಿ ಶಕ್ತಿ’ – ರಾಷ್ಟ್ರೀಯ ಮಾಸ್ಟರ್ ಪ್ಲಾನ್

ಆಧುನಿಕ ಮೂಲಸೌಕರ್ಯದ ಜೊತೆಗೆ, ಮೂಲಸೌಕರ್ಯ ನಿರ್ಮಾಣದಲ್ಲಿ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.

“ನಾವು ಪ್ರಧಾನ ಮಂತ್ರಿ ‘ಗತಿ ಶಕ್ತಿ’ಯ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅನ್ನು ಪ್ರಾರಂಭಿಸಲಿದ್ದೇವೆ, ಇದು ಒಂದು ದೊಡ್ಡ ಯೋಜನೆ ಮತ್ತು ಕೋಟ್ಯಾಂತರ ದೇಶವಾಸಿಗಳ ಕನಸುಗಳನ್ನು ಈಡೇರಿಸಲಿದೆ. 100 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಈ ಯೋಜನೆಯು ಲಕ್ಷಾಂತರ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಗತಿ ಶಕ್ತಿಯು ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಆಗಿದ್ದು, ಇದು ಸಮಗ್ರ ಮೂಲಸೌಕರ್ಯದ ಅಡಿಪಾಯವನ್ನು ಹಾಕುತ್ತದೆ ಮತ್ತು ನಮ್ಮ ಆರ್ಥಿಕತೆಗೆ ಮತ್ತು ಸಮಗ್ರ ಮಾರ್ಗಕ್ಕೆ ಕಾರಣವಾಗುತ್ತದೆ. ಇದೀಗ, ನಮ್ಮ ಸಾರಿಗೆ ಸಾಧನಗಳ ನಡುವೆ ಯಾವುದೇ ಸಮನ್ವಯವಿಲ್ಲ. ಗತಿ ಶಕ್ತಿಯು ಈ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಇದು ಸಾಮಾನ್ಯ ಜನರ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಉದ್ಯಮದ ಉತ್ಪಾದಕತೆಯೂ ಹೆಚ್ಚಾಗುತ್ತದೆ ಎಂದು ಹೇಳಿದರು.

75 ವಂದೇ ಭಾರತ್ ರೈಲುಗಳು

ದೇಶವು ಸ್ವಾತಂತ್ರ್ಯದ ಅಮೃತ್ ಮಹೋತ್ಸವವನ್ನು ಆಚರಿಸಲು ತೀರ್ಮಾನಿಸಿದೆ. ಸ್ವಾತಂತ್ರ್ಯದ ಈ ಅಮೃತ್ ಮಹೋತ್ಸವವನ್ನು ನಾವು 75 ವಾರಗಳವರೆಗೆ ಆಚರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದು ಮಾರ್ಚ್ 12 ರಿಂದ ಆರಂಭವಾಯಿತು ಮತ್ತು 2023 ಆಗಸ್ಟ್ 15 ರವರೆಗೆ ಮುಂದುವರಿಯುತ್ತದೆ. ನಾವು ಹೊಸ ಉತ್ಸಾಹದಿಂದ ಮುಂದುವರಿಯಬೇಕು. ದೇಶವು ಬಹಳ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸ್ವಾತಂತ್ರ್ಯದ ಅಮೃತ್ ಮಹೋತ್ಸವದ ಈ 75 ವಾರಗಳಲ್ಲಿ, 75 ವಂದೇ ಭಾರತ್ ರೈಲುಗಳು ದೇಶದ ಮೂಲೆ ಮೂಲೆಯನ್ನು ಸಂಪರ್ಕಿಸುತ್ತವೆ. ದೇಶದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿರುವ ವೇಗ ಮತ್ತು ದೂರದ ಪ್ರದೇಶಗಳನ್ನು ಸಂಪರ್ಕಿಸುವ ಉಡಾನ್ ಯೋಜನೆ ಅಭೂತಪೂರ್ವವಾಗಿದೆ ಎಂದು ಮೋದಿ ಹೇಳಿದರು.

ಬಾಲಕಿಯರ ಸೈನಿಕ ಶಾಲೆಗಳು

ಪ್ರಧಾನಿ ಮೋದಿ ಇಂದು ಬಾಲಕಿಯರಿಗಾಗಿ ಸೈನಿಕ್ ಶಾಲೆಗಳನ್ನು ಘೋಷಿಸಿದ್ದಾರೆ. ಅವರು ಸೈನಿಕ ಶಾಲೆಗಳಲ್ಲಿ ಕಲಿಯಲು ಬಯಸುವ ಹುಡುಗಿಯರಿಂದ ಲಕ್ಷಾಂತರ ಸಂದೇಶಗಳನ್ನು ಬರುತ್ತಿದ್ದವು ಎಂದು ಅವರು ಹೇಳಿದ್ದು, ಬಾಲಕಿಯರಿಗೆ ಸೈನಿಕ ಶಾಲೆಗಳ ಬಾಗಿಲೂ ತೆರೆಯಬೇಕು. ನಾವು ಎರಡು-ಎರಡೂವರೆ ವರ್ಷಗಳ ಹಿಂದೆ ನಮ್ಮ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡುವ ಮೂಲಕ ಮಿಜೋರಾಂನ ಸೈನಿಕ್ ಶಾಲೆಯಲ್ಲಿ ಪೈಲಟ್ ಪ್ರಾಜೆಕ್ಟ್ ಮಾಡಿದ್ದೇವೆ. ಈಗ ಸರ್ಕಾರವು ಎಲ್ಲಾ ಸೈನಿಕ ಶಾಲೆಗಳನ್ನು ಬಾಲಕಿಯರಿಗಾಗಿ ತೆರೆಯಲು ನಿರ್ಧರಿಸಿದೆ. ಬಾಲಕಿಯರೂ ಕೂಡ ದೇಶದ ಎಲ್ಲಾ ಸೈನಿಕ್ ಶಾಲೆಗಳಲ್ಲಿ ಓದುತ್ತಾರೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹೈಡ್ರೋಜನ್ ಮಿಷನ್

ರಾಷ್ಟ್ರೀಯ ಜಲಜನಕ ಮಿಷನ್ ಸ್ಥಾಪನೆಯನ್ನು ಪ್ರಧಾನಿ ಮೋದಿ ಘೋಷಿಸಿದರು. ಗ್ರೀನ್ ಹೈಡ್ರೋಜನ್ ಪ್ರಪಂಚದ ಭವಿಷ್ಯ ಎಂದು ಅವರು ಹೇಳಿದ್ದು, ನಾವು ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡಬೇಕು. ಇದು ಭಾರತವು ಇಂಧನ ಸ್ವಾವಲಂಬನೆ ಕ್ಷೇತ್ರದಲ್ಲಿ ಹೊಸ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುವುದಲ್ಲದೆ, ಪ್ರಪಂಚದಾದ್ಯಂತ ಸ್ವಚ್ಛ ಇಂಧನ ಪರಿವರ್ತನೆಗೆ ಹೊಸ ಸ್ಫೂರ್ತಿಯಾಗಿ ಪರಿಣಮಿಸುತ್ತದೆ ಎಂದು ಹೇಳಿದರು.

ಸ್ವ-ಸಹಾಯ ಗುಂಪುಗಳಿಗೆ ಇ-ಕಾಮರ್ಸ್ ವೇದಿಕೆ

ಸ್ವ-ಸಹಾಯ ಗುಂಪುಗಳಿಗಾಗಿ, ಪ್ರಧಾನ ಮಂತ್ರಿ ಇಂದು ಇ-ಕಾಮರ್ಸ್ ವೇದಿಕೆಯನ್ನು ಘೋಷಿಸಿದ್ದಾರೆ. ಹಳ್ಳಿಗಳಲ್ಲಿ 8 ಕೋಟಿಗೂ ಹೆಚ್ಚು ಮಹಿಳೆಯರು ಸ್ವಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಉನ್ನತ ಮಟ್ಟದ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತಾರೆ. ಈಗ ಸರ್ಕಾರವು ಅವರಿಗಾಗಿ ತಮ್ಮ ಉತ್ಪನ್ನಗಳಿಗೆ ದೇಶ ಮತ್ತು ವಿದೇಶಗಳಲ್ಲಿ ದೊಡ್ಡ ಮಾರುಕಟ್ಟೆಯನ್ನು ಖಚಿತಪಡಿಸಿಕೊಳ್ಳಲು ಇ-ಕಾಮರ್ಸ್ ವೇದಿಕೆಯನ್ನು ರಚಿಸುತ್ತದೆ ಎಂದು ಹೇಳಿದರು, ಈ ಡಿಜಿಟಲ್ ವೇದಿಕೆ ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳನ್ನು ದೇಶದ ದೂರದ ಪ್ರದೇಶಗಳಲ್ಲಿ ಮತ್ತು ವಿದೇಶಗಳಲ್ಲಿರುವ ಜನರೊಂದಿಗೆ ಸಂಪರ್ಕಪಡಿಸಿ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...