alex Certify ಜೈಲಿನ ಗಾರ್ಡ್‌ಗಳಿಗೆ ಮೆಣಸಿನ ಪುಡಿ ಎರಚಿ ಖೈದಿಗಳು ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನ ಗಾರ್ಡ್‌ಗಳಿಗೆ ಮೆಣಸಿನ ಪುಡಿ ಎರಚಿ ಖೈದಿಗಳು ಪರಾರಿ

ಕಾರಾಗೃಹದ ಭದ್ರತಾ ಸಿಬ್ಬಂದಿಗೆ ಮೆಣಸಿನ ಪುಡಿ ಹಾಗೂ ಉಪ್ಪು ಎರಚಿ ಏಳು ಮಂದಿ ವಿಚಾರಣಾಧೀನ ಖೈದಿಗಳು ಜೈಲಿನಿಂದ ಪರಾರಿಯಾಗ ಘಟನೆ ಅರುಣಾಚಲ ಪ್ರದೇಶದಲ್ಲಿ ಜರುಗಿದೆ.

ಇಲ್ಲಿನ ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್ ಜೈಲಿನ ಐವರು ಗಾರ್ಡ್‌‌ಗಳು ದಾಳಿಯಲ್ಲಿ ಗಾಯಗೊಂಡಿದ್ದಾರೆ. ಖೈದಿಗಳಿಗೆ ರಾತ್ರಿಯ ಊಟ ಪೂರೈಸಲೆಂದು ಜೈಲಿನ ಲಾಕ್‌-ಅಪ್‌ ತೆರೆದ ವೇಳೆ ಹೀಗೆ ಆಗಿದೆ.

ಈ ಏಳು ಮಂದಿ ಖೈದಿಗಳು ದಿಢೀರ್‌ ಎಂದು ಗಾರ್ಡ್‌ಗಳ ಕಣ್ಣುಗಳಿಗೆ ಒಣ ಹಾಗೂ ಕಾಳು ಮೆಣಸಿನಕಾಯಿ ಪುಡಿ ಎರಚಿದ್ದಾರೆ. ಐವರು ಗಾರ್ಡ್‌ಗಳಿಗೆ ಗಾಯಗಳಾಗಿದ್ದು, ಇವರಲ್ಲಿ ಒಬ್ಬರಿಗೆ ಸೆಲ್ ಒಂದರ ಲಾಕ್‌ನಿಂದ ಹಲ್ಲೆ ಮಾಡಿರುವ ಕಾರಣ ಮಾರಣಾಂತಿಕವಾಗಿ ಗಾಯಗಳಾಗಿವೆ. ಇದೇ ವೇಳೆ ಖೈದಿಗಳು ಗಾರ್ಡ್‌ಗಳ ಮೊಬೈಲ್ ಫೋನ್‌ಗಳನ್ನು ಸಹ ಕದ್ದೊಯ್ದಿದ್ದಾರೆ.

ಈ ಏಳು ಖೈದಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...