alex Certify ರೈಲು ಹರಿದು 45 ಕುರಿಗಳು ಸಾವು: ಸತ್ತ ಕುರಿಗಳಲ್ಲಿ ಪಾಲು ಕೇಳಿ ಕುರಿಗಾಹಿಗೆ ರೈಲ್ವೇ ಸಿಬ್ಬಂದಿ ಧಮ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಹರಿದು 45 ಕುರಿಗಳು ಸಾವು: ಸತ್ತ ಕುರಿಗಳಲ್ಲಿ ಪಾಲು ಕೇಳಿ ಕುರಿಗಾಹಿಗೆ ರೈಲ್ವೇ ಸಿಬ್ಬಂದಿ ಧಮ್ಕಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ಬಳಿ ರೈಲು ಹರಿದು 46 ಕುರಿಗಳು ಸಾವನ್ನಪ್ಪಿವೆ.

ತುಮಕೂರು ಜಿಲ್ಲೆ ಗುಬ್ಬಿ ಮೂಲದ ರೈತ ದೇವರಾಜು ಅವರಿಗೆ ಸೇರಿದ ಕುರಿಗಳು ರೈಲು ಹರಿದು ಮೃತಪಟ್ಟಿವೆ. ಕೆರೆಯಲ್ಲಿ ನೀರು ಕುಡಿದು ಹಿಂತಿರುಗುತ್ತಿದ್ದ ಕುರಿ ಮಂದೆ ಮೇಲೆ ರೈಲು ಹರಿದ ಪರಿಣಾಮ 15 ಲಕ್ಷಕ್ಕೂ ಹೆಚ್ಚು ಮೌಲ್ಯದ 46 ಕುರಿಗಳು ಸಾವನ್ನಪ್ಪಿವೆ.

ದೇವರಾಜು ಅವರು ಸತ್ತ ಕುರಿಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಿದ್ದಾರೆ. ಈ ವೇಳೆ ಐದು ಕುರಿ ಉಚಿತವಾಗಿ ನೀಡುವಂತೆ ರೈಲ್ವೆ ಸಿಬ್ಬಂದಿಯೊಬ್ಬ ಧಮ್ಕಿ ಹಾಕಿದ್ದಾರೆ. ಸತ್ತ ಕುರಿಗಳಲ್ಲಿ ಪಾಲು ಕೇಳಿದ ರೈಲ್ವೆ ಸಿಬ್ಬಂದಿ ವಿರುದ್ಧ  ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...