alex Certify ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಅನುಮಾನದ ಮೇಲೆ ವ್ಯಕ್ತಿಗೆ ಇರಿದು ಪರಾರಿಯಾಗಿದ್ದ ಪತಿ ಒಂದು ವರ್ಷದ ನಂತರ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಅನುಮಾನದ ಮೇಲೆ ವ್ಯಕ್ತಿಗೆ ಇರಿದು ಪರಾರಿಯಾಗಿದ್ದ ಪತಿ ಒಂದು ವರ್ಷದ ನಂತರ ಅರೆಸ್ಟ್

ಮುಂಬೈ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಅನುಮಾನದ ಮೇಲೆ ವ್ಯಕ್ತಿಗೆ ಇರಿದು ಪರಾರಿಯಾಗಿದ್ದ ಕಿಡಿಗೇಡಿಯನ್ನು ಒಂದು ವರ್ಷದ ನಂತರ ಬಂಧಿಸಲಾಗಿದೆ.

ಮೀರಾ-ಭಯಂದರ್ ಪೋಲೀಸರ ಬಲೆಯಿಂದ ತಪ್ಪಿಸಿಕೊಂಡು ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಆತನನ್ನು ಬಂಧಿಸಲಾಗಿದೆ. ತನ್ನ ಹೆಂಡತಿಯ ಜತೆ ಸಂಬಂಧ ಹೊಂದಿದ ಆರೋಪದ ಮೇಲೆ ಸೆಪ್ಟೆಂಬರ್ 2022 ರಲ್ಲಿ ಯುವಕನ ಕೊಲೆಗೆ ಯತ್ನಿಸಿದ 36 ವರ್ಷದ ವ್ಯಕ್ತಿಯನ್ನು ಅಂತಿಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಪ್ರಕಾರ, ಶ್ರವಣ್ ಕುಮಾರ್ ಮೌರ್ಯ ಎಂದು ಗುರುತಿಸಲಾದ ಆರೋಪಿಯು ಸೆಪ್ಟೆಂಬರ್ 13, 2022 ರಂದು ವಸಾಯಿಯ ಗೌರೈಪಾಡಾ ಪ್ರದೇಶದ ವಠಾರದಲ್ಲಿ 28 ವರ್ಷದ ಶೈಲೇಂದ್ರ ಸಿಂಗ್‌ ಗೆ ಪದೇ ಪದೇ ಇರಿದ ನಂತರ ಪರಾರಿಯಾಗಿದ್ದಾನೆ. ಸಿಂಗ್ ಅವರ ಮೇಲೆ ಗಂಭೀರವಾದ ಗಾಯಗಳಾಗಿವೆ. ಅದೃಷ್ಟವಶಾತ್ ದಾಳಿಯಿಂದ ಬದುಕುಳಿದರು.

ಆರೋಪಿಯು ಸಿಂಗ್ ತನ್ನ ಹೆಂಡತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ್ದ. ಇದು ಇಬ್ಬರ ನಡುವೆ ತೀವ್ರ ಜಗಳದ ನಂತರ ಹಲ್ಲೆಗೆ ಕಾರಣವಾಯಿತು. ಅಪರಾಧ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಅಡಿಯಲ್ಲಿ ವಲಿವ್ ಪೊಲೀಸ್ ಠಾಣೆಯಲ್ಲಿ ಅಪರಾಧ ದಾಖಲಾಗಿದೆ.

ಆರೋಪಿ ಪತ್ತೆ ಹಚ್ಚಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ ವಿಫಲರಾಗಿದ್ದರು. ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಬಂಧಿಸುವ ಭಾಗವಾಗಿ ಡಿಸಿಪಿ(ವಲಯ III) ಪೂರ್ಣಿಮಾ ಶೃಂಗಿ ಚೌಗ್ಲೆ ಅವರ ಮೇಲ್ವಿಚಾರಣೆಯಲ್ಲಿ ಎಪಿಐ ಸಚಿನ್ ಸನಪ್ ನೇತೃತ್ವದ ಅಪರಾಧ ಪತ್ತೆ ಘಟಕ ಪ್ರಕರಣದ ಮರು ತನಿಖೆ ಪ್ರಾರಂಭಿಸಿತು. ದೃಢವಾದ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯಿಂದ ಬೆಂಬಲಿತ ಮಾಹಿತಿದಾರರು ಒದಗಿಸಿದ ಇನ್‌ಪುಟ್‌ಗಳನ್ನು ಆಧರಿಸಿ, ಸನಪ್ ಮತ್ತು ಅವರ ತಂಡವು ಗುರುವಾರ ನಲ್ಲಸೊಪಾರಾದ ಬಿಲಾಲ್‌ಪಾಡಾ ಪ್ರದೇಶದಿಂದ ಮೌರ್ಯನನ್ನು ಬಲೆ ಬೀಸಿ ಬಂಧಿಸಿತು.

ಮಿರ್ಜಾಪುರ(ಉತ್ತರ ಪ್ರದೇಶ) ಮೂಲದ ಮೌರ್ಯ ಪೊಲೀಸರನ್ನು ವಂಚಿಸುವ ಪ್ರಯತ್ನದಲ್ಲಿ ವಿಭಿನ್ನ ವೇಷಗಳಲ್ಲಿ ತನ್ನ ಸ್ಥಳಗಳನ್ನು ಆಗಾಗ್ಗೆ ಬದಲಾಯಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...