alex Certify BIG NEWS: ಹಳಿತಪ್ಪಿದ ಪಾರಂಪರಿಕ ರೈಲು – ಮೂವರ ದಾರುಣ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಳಿತಪ್ಪಿದ ಪಾರಂಪರಿಕ ರೈಲು – ಮೂವರ ದಾರುಣ ಸಾವು

ಗಾಳಿ ಸಹಿತ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಮಾಥೆರಾನ್​ನ ಜನಪ್ರಿಯ ಗಿರಿಧಾಮದಲ್ಲಿ ಪಾರಂಪರಿಕ ಆಟಿಕೆ ರೈಲು ಹಳಿ ತಪ್ಪಿದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು ಮಾತ್ರವಲ್ಲದೇ 20 ಮಂದಿ ಗಾಯಗೊಂಡಿದ್ದಾರೆ.

ಮಾರ್ಗದುದ್ದಕ್ಕೂ ಭೂಕುಸಿತ ಸಂಭವಿಸಿದ್ದರಿಂದ ರೈಲ್ವೆ ಕೋಚ್​ಗಳು ಹಳಿ ತಪ್ಪಿದವು ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಮಾಥೆರಾನ್​ ಜಿಲ್ಲಾ ಪರಿಷತ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಯಗಡ ಜಿಲ್ಲೆಯ ಮಾಥೆರಾನ್​, ಮುಂಬೈನಿಂದ ಸುಮಾರು 100 ಕಿಲೋಮೀಟರ್​ ದೂರದಲ್ಲಿದೆ. ಇದು ವಾರಾಂತ್ಯದಲ್ಲಿ ಮೋಜು – ಮಸ್ತಿ ಮಾಡಲು ಇಷ್ಟ ಪಡುವವರಿಗೆಂದೇ ಇರುವ ಜನಪ್ರಿಯ ತಾಣವಾಗಿದೆ. ಹಾಗೂ ಏಷ್ಯಾದ ಏಕೈಕ ಆಟೋಮೊಬೈಲ್​​ ರಹಿತ ಗಿರಿಧಾಮವಾಗಿದೆ.

ದುರಂತಕ್ಕೀಡಾದ ನ್ಯಾರೋ -ಗೇಜ್​ ರೈಲು ಡೀಸೆಲ್​ ಚಾಲಿತ ಇಂಜಿನ್​ ಹಾಗೂ ಐದು ಬೋಗಿಗಳನ್ನು ಹೊಂದಿದೆ. ಮಾಥೆರಾನ್​ ಹಾಗೂ ಅಮನ್​​ ಲಾಡ್ಜ್​​​ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ. ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶ ನೀಡಲಾಗಿದೆ.

ಮೃತರನ್ನು ಡಾ.ಹಂಸರಾಜ್​ ಹಥಿ ಹಾಗೂ ಜೈಕುಮಾರ್​ ಎಂದು ಗುರುತಿಸಲಾಗಿದೆ. ಇನ್ನೊಂದು ಮೃತದೇಹ ಯಾರದ್ದು ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...