alex Certify ಸ್ನೇಹಕ್ಕೆ ಅಡ್ಡಿ ತಂದಿತಾ ಕೋಮು ಘರ್ಷಣೆ….? ಗೆಳೆಯರಿಂದಲೇ ನಡೀತು ಯುವಕನ ಬರ್ಬರ ಕೊಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಕ್ಕೆ ಅಡ್ಡಿ ತಂದಿತಾ ಕೋಮು ಘರ್ಷಣೆ….? ಗೆಳೆಯರಿಂದಲೇ ನಡೀತು ಯುವಕನ ಬರ್ಬರ ಕೊಲೆ….!

18 ವರ್ಷದ ಯುವಕನನ್ನು ಆತನ ಸ್ನೇಹಿತರೇ ಕೊಲೆಗೈದ ಘಟನೆಯು ದಕ್ಷಿಣ ದೆಹಲಿಯ ಸಂಗಮ್​ ವಿಹಾರದಲ್ಲಿ ನಡೆದಿದೆ. ಕೊಲೆಗಾರರು ಯುವಕನನ್ನು ಕೊಲೆ ಮಾಡುವ ಮುನ್ನ ಕೋಮು ನಿಂದನೆ ಮಾಡಿದ್ದಾರೆ ಎಂದು ಮೃತ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ಅಂಧ ಭಿಕ್ಷುಕನ ಬಳಿ 65 ಸಾವಿರ ರೂ. ಮುಖಬೆಲೆಯ ಅಮಾನ್ಯೀಕರಣಗೊಂಡ ನೋಟು…!

ಆದರೆ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಪೊಲೀಸರು ಹಣದ ವಿಚಾರದಲ್ಲಿ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಿದ್ದಾರೆ. ಬಲ್ಲ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಯುವತಿಯ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಯುವಕನನ್ನು ಕೊಲೆ ಮಾಡಿದವರೆಲ್ಲರೂ ಆತನ ಸ್ನೇಹಿತರು ಎನ್ನಲಾಗಿದೆ. ಆದರೆ ಕೊಲೆಗೆ ನಿಖರವಾದ ಕಾರಣ ಏನು ಎಂಬುವುದು ಇನ್ನೂ ನಿಗೂಢವಾಗಿದೆ. ಕೊಲೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಒಂದೇ ಕಡೆ ಸಿಗಲಿದೆ ಎಲ್ಲಾ ದಾಖಲೆ

ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸ್ಥಳೀಯರು ಪ್ರಕರಣ ನಡೆದ ಸ್ಥಳದಲ್ಲೇ ಇದ್ದರೂ ಸಹ ಯಾರೊಬ್ಬರೂ ಯುವಕನ ರಕ್ಷಣೆಗೆ ಬಂದಿಲ್ಲದೇ ಇರೋದನ್ನು ಕಾಣಬಹುದಾಗಿದೆ. ಮೃತ ಯುವಕನನ್ನು ಇಮ್ರಾನ್​ ಎಂದು ಗುರುತಿಸಲಾಗಿದೆ. ಈತ ಸಂಗಮ್​ ವಿಹಾರದ ನಿವಾಸಿಯಾಗಿದ್ದು ದೆಹಲಿಯಲ್ಲಿ ಸೇಲ್ಸ್​ ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.

ಕೊಲೆಯ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತಲುಪುವ ವೇಳೆಗೆ ಇಮ್ರಾನ್​​ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೂಡಲೇ ಆತನನ್ನು ಏಮ್ಸ್​ಗೆ ದಾಖಲು ಮಾಡಲಾಯ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...