alex Certify ವಿದ್ಯಾರ್ಥಿನಿಗೆ ಕಾಮುಕ ಉಪನ್ಯಾಸಕನಿಂದ ಕಿರುಕುಳ; ಮನನೊಂದ ಅಪ್ರಾಪ್ತೆ ನೇಣಿಗೆ ಶರಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿಗೆ ಕಾಮುಕ ಉಪನ್ಯಾಸಕನಿಂದ ಕಿರುಕುಳ; ಮನನೊಂದ ಅಪ್ರಾಪ್ತೆ ನೇಣಿಗೆ ಶರಣು

ಕಾಲೇಜು ಉಪನ್ಯಾಸಕ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಮನನೊಂದ 17 ವರ್ಷದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ.

ಕೋವಿಡ್​ 19 ಪರಿಸ್ಥಿತಿಯಿಂದಾಗಿ ಬಂದ್​ ಆಗಿದ್ದ ಕಾಲೇಜು ಕೆಲ ದಿನಗಳ ಹಿಂದಷ್ಟೇ ಆರಂಭವಾಗಿತ್ತು. ಹೀಗಾಗಿ ಮೃತ ವಿದ್ಯಾರ್ಥಿನಿ ಕೂಡ ಕಾಲೇಜಿಗೆ ತೆರಳಲು ಆರಂಭಿಸಿದ್ದಳು. ಆದರೆ ಇದ್ದಕ್ಕಿದ್ದಂತೆ ಓದನ್ನು ನಿಲ್ಲಿಸಲು ಬಯಸಿದ ವಿದ್ಯಾರ್ಥಿನಿ ಕಾಲೇಜಿನಿಂದ ತನ್ನ ವರ್ಗಾವಣೆ ಪತ್ರವನ್ನೂ ಪಡೆದುಕೊಂಡಿದ್ದಳು.
ವಿದ್ಯಾರ್ಥಿನಿ ನೇಣು ಬಿಗಿದುಕೊಂಡ ಕೋಣೆಯಲ್ಲಿ ಸೂಸೈಡ್​ ನೋಟ್​ ಕೂಡ ಸಿಕ್ಕಿದೆ. ಈ ಸೂಸೈಡ್​ ನೋಟ್​ನಲ್ಲಿ ವಿದ್ಯಾರ್ಥಿನಿ ಮೂವರ ಹೆಸರನ್ನು ಉಲ್ಲೇಖಿಸಿದ್ದಾಳೆ. ಪೋಷಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದ ಉಪನ್ಯಾಸಕನ ಕಿರುಕುಳದಿಂದಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.

ಅಗ್ಗದ ಬೆಲೆಗೆ ಬಿಎಸ್‌ಎನ್‌ಎಲ್ ನೀಡ್ತಿದೆ ಡೇಟಾ, ಉಚಿತ ಕರೆ

ಈ ವಿಚಾರವಾಗಿ ಮಾತನಾಡಿದ ಮೃತ ವಿದ್ಯಾರ್ಥಿನಿಯ ತಂದೆ ಮುಕುಟೇಶ್ವರಂ, ನನ್ನ ಮಗಳು ಕಾಲೇಜು ಸಿಬ್ಬಂದಿ ಮಿಥುನ್​ ಚಕ್ರವರ್ತಿ ವಿರುದ್ಧ ದೂರನ್ನು ನೀಡಿದ್ದರೂ ಸಹ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಆತ ನನ್ನ ಮಗಳಿಗೆ ನಿರಂತರ ಕಿರುಕುಳ ನೀಡುತ್ತಲೇ ಇದ್ದ. ಆದರೆ ಕಾಲೇಜು ಪ್ರಾಂಶುಪಾಲ ಮಾತ್ರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಮಿಥುನ ಚಕ್ರವರ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಮಿಥುನ್​ ಚಕ್ರವರ್ತಿ ವಿರುದ್ಧ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...