alex Certify 15 ನೇ ಮಹಡಿಯಿಂದ ನೇತಾಡಿದ್ದರ ಆಘಾತಕಾರಿ ಘಟನೆ ಬಿಚ್ಚಿಟ್ಟ ಯಜುವೇಂದ್ರ ಚಹಾಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ನೇ ಮಹಡಿಯಿಂದ ನೇತಾಡಿದ್ದರ ಆಘಾತಕಾರಿ ಘಟನೆ ಬಿಚ್ಚಿಟ್ಟ ಯಜುವೇಂದ್ರ ಚಹಾಲ್…!

ಪ್ರಸ್ತುತ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಟವಾಡುತ್ತಿರುವ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್ 2013 ರಲ್ಲಿ ನಡೆದಿದ್ದ ಆಘಾತಕಾರಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ತಾವು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿ ಬಂದ ಬಗೆಯನ್ನು ‘ಕಂಬ್ಯಾಕ್ ಸ್ಟೋರಿ’ ಕಾರ್ಯಕ್ರಮದಲ್ಲಿ ಅವರು ಹೇಳಿಕೊಂಡಿದ್ದಾರೆ.

2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಯಜುವೇಂದ್ರ ಚಹಾಲ್ ಆಟವಾಡಿದ್ದು, ಈ ವೇಳೆ ಪಂದ್ಯವೊಂದರ ಸಲವಾಗಿ ಬೆಂಗಳೂರಿಗೆ ಬಂದಿದ್ದರೆನ್ನಲಾಗಿದೆ. ಪಂದ್ಯದ ಬಳಿಕ ಗೆಟ್ ಟುಗೆದರ್ ಪಾರ್ಟಿ ಇದ್ದು, ಈ ಸಂದರ್ಭದಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದ ತಂಡದ ಸದಸ್ಯರೊಬ್ಬರು ಯಜುವೇಂದ್ರ ಚಹಾಲ್ ಅವರನ್ನು 15ನೇ ಮಹಡಿಯಿಂದ ನೇತಾಡಿಸಿದ್ದರಂತೆ. ಅವರ ಕೈ ಕೊಂಚ ತಪ್ಪಿದರೂ ಕೆಳಗೆ ಬಿದ್ದು ಚಹಾಲ್ ಅವರ ಪ್ರಾಣವೇ ಹೋಗುತ್ತಿತ್ತಂತೆ.

BREAKING: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪುತ್ರನೂ ಭಯೋತ್ಪಾದಕ: ಭಾರತ ಘೋಷಣೆ

ಅಷ್ಟರಲ್ಲಿ ಇದನ್ನು ಗಮನಿಸಿದ ತಂಡದ ಇತರೆ ಆಟಗಾರರು ಓಡೋಡಿ ಬಂದು ಯಜುವೇಂದ್ರ ಚಹಾಲ್ ಅವರನ್ನು ಎಳೆದುಕೊಂಡರಂತೆ. ಈ ಘಟನೆಯಿಂದ ನಾನು ತತ್ತರಿಸಿ ಹೋಗಿದ್ದೆ ಎಂದು ಹೇಳಿರುವ ಚಹಾಲ್, ಆ ರೀತಿ ಮಾಡಿದ ಆಟಗಾರ ಯಾರು ಎಂಬುದರ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...