alex Certify ಮಣಪ್ಪುರಂ ಶಾಖೆಯಲ್ಲಿ ಉದ್ಯೋಗಿಯಿಂದಲೇ 10 ಕೆಜಿ ಚಿನ್ನ ಕಳವು : ದೂರು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣಪ್ಪುರಂ ಶಾಖೆಯಲ್ಲಿ ಉದ್ಯೋಗಿಯಿಂದಲೇ 10 ಕೆಜಿ ಚಿನ್ನ ಕಳವು : ದೂರು ದಾಖಲು

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಂಕಿಪಾಡು ಗ್ರಾಮದ ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್ ಶಾಖೆಯಿಂದ 6 ಕೋಟಿ ರೂ.ಮೌಲ್ಯದ ಸುಮಾರು 10 ಕೆಜಿ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

10 ಕೆಜಿ ಚಿನ್ನದೊಂದಿಗೆ ಪರಾರಿಯಾಗಿರುವ ಬ್ಯಾಂಕ್ ಉದ್ಯೋಗಿ ಪಾವನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾವನಿ ಮತ್ತು ಇತರ ಒಬ್ಬ ಉದ್ಯೋಗಿ ಚಿನ್ನವನ್ನು ಕದ್ದಿರಬಹುದು ಎಂದು ಬ್ಯಾಂಕ್ ಅಧಿಕಾರಿಗಳು ತಮ್ಮ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಬ್ಯಾಂಕ್ ಅಧಿಕಾರಿಗಳ ತನಿಖೆಯ ನಂತರ, ಮ್ಯಾನೇಜರ್ ಪಾವನಿ 1,447 ಗ್ರಾಹಕರು ಅಡವಿಟ್ಟಿದ್ದ 16 ಕೆಜಿ ಚಿನ್ನದಲ್ಲಿ 10 ಕೆಜಿ ಕದ್ದಿರುವುದು ದೃಢಪಟ್ಟಿದೆ.ಪಾವನಿ ಪರಾರಿಯಾಗಿದ್ದು, ಕಳ್ಳತನದಲ್ಲಿ ಆಕೆಯ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಗಾಗಿ ಹುಡುಕಾಟ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...