alex Certify 1 ತಿಂಗಳು ಪೂರೈಸಿದ ರಷ್ಯಾ-ಉಕ್ರೇನ್​ ಸಂಘರ್ಷ: ಇಲ್ಲಿಗೇ ಮುಗಿದಿಲ್ಲ ಎಂದ ಯುದ್ಧ ತಜ್ಞರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ತಿಂಗಳು ಪೂರೈಸಿದ ರಷ್ಯಾ-ಉಕ್ರೇನ್​ ಸಂಘರ್ಷ: ಇಲ್ಲಿಗೇ ಮುಗಿದಿಲ್ಲ ಎಂದ ಯುದ್ಧ ತಜ್ಞರು

Russia Ukraine one month of war.

ಸರಿಯಾಗಿ ಒಂದು ತಿಂಗಳ ಹಿಂದೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸುತ್ತಿರುವುದಾಗಿ ಟಿವಿ ಮಾಧ್ಯಮದ ಮೂಲಕ ಘೋಷಣೆ ಮಾಡಿದ್ದರು. ಅಲ್ಲದೇ ಉಕ್ರೇನ್​​ ತನ್ನ ನಿಲುವು ಬದಲಾಯಿಸದೇ ಹೋದಲ್ಲಿ ಪರಮಾಣು ಪ್ರತೀಕಾರ ತೀರಿಸಿಕೊಳ್ಳುವ ಸಂದರ್ಭ ಬರಲೂಬಹುದು ಎಂದು ಎಚ್ಚರಿಕೆ ನೀಡಿದ್ದರು.

ಈ ಘೋಷಣೆಯನ್ನು ಹೊರಡಿಸಿ ಈಗಾಗಲೇ ನಾಲ್ಕು ವಾರಗಳು ಕಳೆದಿವೆ. ರಷ್ಯಾದ ಪಡೆಗಳು ಉಕ್ರೇನ್ ಮೇಲೆ ವೈಮಾನಿಕ ದಾಳಿಗಳನ್ನು ನಡೆಸುತ್ತಿವೆ. ಉಕ್ರೇನ್​ನ ಪ್ರಮುಖ ನಗರಗಳನ್ನು ನಾಶ ಮಾಡಿವೆ. ದಶಕಗಳ ಇತಿಹಾಸದಲ್ಲೇ ಯುರೋಪ್​ ಕಂಡ ಅತ್ಯಂತ ಕೆಟ್ಟ ಹಿಂಸಾಚಾರ ಇದಾಗಿದ್ದು ಲಕ್ಷಾಂತರ ಜನರನ್ನು ಉಕ್ರೇನ್​​ನಿಂದ ಪಲಾಯನಗೊಳ್ಳುವಂತೆ ಮಾಡಿದೆ. ಅಲ್ಲದೇ ಈ ಯುದ್ಧವು ಈಗಾಗಲೇ ಜಾಗತಿಕವಾಗಿ ಆರ್ಥಿಕ ಹಾಗೂ ಆಹಾರ ಬಿಕ್ಕಟ್ಟುಗಳ ಭಯವನ್ನು ಹುಟ್ಟು ಹಾಕಿದೆ.

ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಶ್ಲೇಷಕರು ತಿಂಗಳುಗಳ ಹಿಂದೆಯೇ ಹೀಗೊಂದು ಪ್ರಸಂಗ ಎದುರಾಗಬಹುದು ಎಂದು ಊಹಿಸಿದ್ದರು. ರಷ್ಯಾದ ಈ ಮಿಲಿಟರಿ ಕಾರ್ಯಾಚರಣೆಯು ವಿನಾಶಕಾರಿ ಎಂದು ಪರಿಗಣಿಸಲಾಗಿದೆ.

ಅಮೆರಿಕದಂತಹ ಡಜನ್​ಗಟ್ಟಲೇ ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ ಉಕ್ರೇನ್​ ಕೂಡ ರಷ್ಯಾವನ್ನು ಎದುರಿಸುತ್ತಿದೆ. ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​​ ಝೆಲೆನ್ಸ್ಕಿ ಕೂಡ ಈ ಪರಿಸ್ಥಿತಿಯನ್ನು ಎದುರಿಸಲು ಜನರಿಗೆ ಸ್ಪೂರ್ತಿಯನ್ನು ನೀಡುತ್ತಲೇ ಇದ್ದಾರೆ.

ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳು ಹೆಚ್ಚಾಗಿ ವಾಷಿಂಗ್ಟನ್​ನಿಂದ ಸರಬರಾಜು ಮಾಡಲ್ಪಟ್ಟಿದೆ. ಇದು ರಷ್ಯಾದ ಆಕ್ರಮಣವನ್ನು ವಿರೋಧಿಸಲು ಉಕ್ರೇನ್​​ಗೆ ಸಿಕ್ಕ ಪ್ರಮುಖ ಸಹಾಯವಾಗಿದೆ. ಇವೆಲ್ಲ ಏನೇ ಇದ್ದರೂ ಹೆಚ್ಚಿನ ತಜ್ಞರು ಎರಡೂ ಕಡೆಯವರಿಗೂ ಗೆಲುವು ಸಾಧಿಸುವುದು ಕಷ್ಟ ಹಾಗೂ ದುಬಾರಿ ಎಂದಿದ್ದಾರೆ. ಅಲ್ಲದೇ ಈ ಘರ್ಷಣೆಯು ಇನ್ನಷ್ಟು ಹಿಂಸಾಚಾರ ರೂಪವನ್ನು ಪಡೆದುಕೊಳ್ಳಲಿದೆ ಎಂದು ಊಹಿಸಲಾಗಿದೆ.

ರಷ್ಯಾದ ಈ ಎಲ್ಲ ಆಕ್ರಮಣವನ್ನು ಉಕ್ರೇನ್​ ಎಷ್ಟರವರೆಗೆ ತಡೆದುಕೊಳ್ಳಬಹುದು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಉಕ್ರೇನ್​ ಪಾಶ್ಚಿಮಾತ್ಯ ಬೆಂಬಲವನ್ನು ಪಡೆದುಕೊಳ್ಳುವ ವೇಗವನ್ನು ಇದು ಅವಲಂಬಿಸಿದೆ. ಅಲ್ಲದೇ ಉಕ್ರೇನ್​​ನ ಜನರು ಈ ಸಂಘರ್ಷವನ್ನು ಎಷ್ಟರ ಮಟ್ಟಿಗೆ ತಡೆದುಕೊಳ್ಳಬಲ್ಲರು ಎಂಬುವುದು ಕೂಡ ಮಹತ್ವದ್ದಾಗಿದೆ ಎಂದು ರಷ್ಯಾದ ಮಿಲಿಟರಿ ತಜ್ಞ ಮತ್ತು ಲಂಡನ್ ಥಿಂಕ್ ಟ್ಯಾಂಕ್‌ನ ಹಿರಿಯ ಸಲಹೆಗಾರ ಕೀರ್ ಗೈಲ್ಸ್ ಹೇಳಿದ್ದಾರೆ.

ಸುಮಾರು 10 ಮಿಲಿಯನ್ ಜನರು ಅಂದರೆ ಉಕ್ರೇನ್‌ನ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ, ವಿಶ್ವಸಂಸ್ಥೆಯ ಪ್ರಕಾರ, ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಅಥವಾ ಪೋಲೆಂಡ್ ಮತ್ತು ಮೊಲ್ಡೊವಾದಂತಹ ನೆರೆಯ ದೇಶಗಳಿಗೆ ನಿರಾಶ್ರಿತರಾಗಿ ಟ್ರೆಕ್ಕಿಂಗ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...