alex Certify ಹೆಚ್.ವಿಶ್ವನಾಥ್ ಗೆ ತಿರುಗೇಟು ನೀಡಿದ ಸಚಿವ ಸೋಮಶೇಖರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್.ವಿಶ್ವನಾಥ್ ಗೆ ತಿರುಗೇಟು ನೀಡಿದ ಸಚಿವ ಸೋಮಶೇಖರ್….!

ಮೈಸೂರು- ಈ ಬಾರಿಯ ದಸರ ಅದ್ಧೂರಿ ಅನ್ನೋದು ಒಂದು ಕಡೆ ಸುದ್ದಿಯಾದ್ರೆ, ಮತ್ತೊಂದು ಕಡೆ ಒಂದಿಷ್ಟು ಯಡವಟ್ಟಿನಿಂದ ಸುದ್ದಿಯಾಗಿದೆ. ಈ ವಿಚಾರವಾಗಿ ಎಮ್ ಎಲ್ ಸಿ ವಿಶ್ವನಾಥ್ ಈ ಬಾರಿ ದಸರಾದಲ್ಲಿ ಅದ್ವಾನಗಳು ನಡೆದವು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ದಸರಾ ನಡೆದ ನಂತರ ಹೀಗೆ ಮಾತಾಡ್ತಾ ಇದ್ದಾರೆ. ಕೆಲವೊಬ್ಬರು ಜೊತೆಯಲ್ಲಿ ಇದ್ದುಕೊಂಡೆ ಮದ್ದು ಹಾಕಿ ಬಿಡ್ತಾರೆ. ಅಂತವರಿಗೆ ಏನು ಮಾಡೋದು. ಆ ಚಾಮುಂಡಿ ತಾಯಿ ಒಳ್ಳೇದು ಮಾಡಲಿ ಅಂತ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು. ರಾಜಕೀಯವಾಗಿ ಏನೂ ಮಾಡಲು ಆಗದೇ ಇದ್ದಾಗ ಹೀಗೆ ಮಾಡ್ತಾರೆ ಅಂತ ಹೇಳಿದ್ದಾರೆ. ಜೊತೆಗೆ ಅಂತವರನ್ನು ಎದುರಿಸಲು ಚಾಮುಂಡಿ ನನಗೆ ಶಕ್ತಿ ನೀಡಲಿ ಎಂದರು.

ಇನ್ನು ಮೋದಿಯವರಿಂದ ಸೇರಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ದಸರಾ ಯಶಸ್ಸಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ದಸರಾ ತುಂಬಾ ಚೆನ್ನಾಗಿ ಆಗಿದೆ. ಶೀಘ್ರದಲ್ಲೇ ದಸರಾಗೆ ಖರ್ಚಾದ ಲೆಕ್ಕಾಚಾರ ಹೇಳ್ತೀನಿ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...