alex Certify ಹೆಚ್ಚಿದ ಪ್ರವಾಹ : ದೋಣಿ ಏರಿ ವರನ ನಿವಾಸಕ್ಕೆ ತೆರಳಿದ ವಧು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚಿದ ಪ್ರವಾಹ : ದೋಣಿ ಏರಿ ವರನ ನಿವಾಸಕ್ಕೆ ತೆರಳಿದ ವಧು..!

ಕಲ್ಯಾಣ ಮಂಟಪಕ್ಕೆ ವಧು ಎಂಟ್ರಿ ನೀಡುವ ಸಾಕಷ್ಟು ತರಹದ ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಕುದುರೆ ಏರಿ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡುವುದರಿಂದ ಟ್ರ್ಯಾಕ್ಟರ್​ ಏರಿ ಬಂದ ವಧುವಿನವರೆಗೂ ನಾವು ನೋಡಿದ್ದೇವೆ. ಇದೀಗ ಆಂಧ್ರ ಪ್ರದೇಶದ ವಧುವೊಬ್ಬರು ವಿಭಿನ್ನ ರೀತಿಯಲ್ಲಿ ಮದುವೆಗೆ ಎಂಟ್ರಿಕೊಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.
ಎರಡು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದ್ದು ಪ್ರಶಾಂತಿ ಹಾಗೂ ಆಕೆಯ ಸಂಪೂರ್ಣ ಕುಟುಂಬ ವರ ಅಶೋಕನ ನಿವಾಸಕ್ಕೆ ದೋಣಿಯಲ್ಲಿ ತೆರಳಿದ್ದಾರೆ. ಆಂಧ್ರ ಪ್ರದೇಶದ ಕೋನಸೀಮಾ ಜಿಲ್ಲೆಯ ಪೆದಪಟ್ನಂಲಂಕಾದಲ್ಲಿ ನಿರ್ಮಾಣವಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ವಧು ದೋಣಿಯ ಮೂಲಕ ವರನ ನಿವಾಸಕ್ಕೆ ಬರಬೇಕಾಗಿ ಬಂದಿದೆ.
ಆಗಸ್ಟ್​ನಲ್ಲಿ ಭಾರೀ ಮಳೆಯಾಗೋದ್ರಿಂದ ಜುಲೈನಲ್ಲಿಯೇ ವಿವಾಹವಾಗೋಣ ಎಂದು ಪ್ರಶಾಂತಿ ಮತ್ತು ಅಶೋಕ್​ ನಿರ್ಧರಿಸಿದ್ದರು. ಆದರೆ ಮಳೆಯು ಜುಲೈ ತಿಂಗಳಲ್ಲಿಯೇ ಹೆಚ್ಚಾಗಿದೆ. ಆದರೂ ಚಿಂತೆ ಮಾಡದ ಪ್ರಶಾಂತಿ ದೋಣಿ ಏರಿ ಗಂಡನ ಮನೆ ತಲುಪಿದ್ದಾಳೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...