alex Certify ಹೆಂಡತಿಯ ಅನೈತಿಕ ಸಂಬಂಧ; ಪತ್ನಿ‌ ಹಾಗೂ ಅತ್ತೆಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡತಿಯ ಅನೈತಿಕ ಸಂಬಂಧ; ಪತ್ನಿ‌ ಹಾಗೂ ಅತ್ತೆಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ…!

ನಗರದಲ್ಲಿ ನಡೆದಿರುವ ಅಮ್ಮ-ಮಗಳ ಡಬಲ್‌ ಮರ್ಡರ್ ಪ್ರಕರಣ ಇಡೀ ಬೆಂಗಳೂರಿಗರನ್ನ ಬೆಚ್ಚಿಸಿದೆ.‌‌ ಪತಿಯೆ ಹೆಂಡತಿ ಹಾಗೂ ಅತ್ತೆ ಇಬ್ಬರನ್ನು ಕೊಚ್ಚಿ ಕೊಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಮೂಡಲಪಾಳ್ಯದ ನಿವಾಸದಲ್ಲಿ ಕೊಲೆ ನಡೆದಿದೆ. ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಪತಿ ರವಿಕುಮಾರ್, ಪತ್ನಿ ಹಾಗೂ ಅತ್ತೆಯನ್ನು ಕೊಂದಿದ್ದಾನೆಂದು ತಿಳಿದು ಬಂದಿದೆ.

ಮೃತ ದುರ್ದೈವಿಗಳನ್ನು ಸುನಿತ ಹಾಗೂ ಸರೋಜಮ್ಮ‌ ಎಂದು ಗುರುತಿಸಲಾಗಿದೆ.‌ ಪತ್ನಿಯ ಅಕ್ರಮ‌ ಸಂಬಂಧದಿಂದ‌ ಮನೆಯಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಸೋಮವಾರ ಈ ಜಗಳ ತಾರಕ್ಕೇರಿ, ಅದು ಕೊಲೆಯಲ್ಲಿ ಅಂತ್ಯವಾಗಿದೆ.‌

ಪತ್ನಿ‌ ಸುನಿತಳನ್ನ ಆರೋಪಿ ರವಿಕುಮಾರ್ ಎಳನೀರು ಕೊಚ್ಚೊ ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ. ಆತನನ್ನು ಬಿಡಿಸಲು ಬಂದ ಅತ್ತೆಯನ್ನು ಅದೇ ಮಚ್ಚಿನಿಂದ ಕೊಂದು ಹಾಕಿದ್ದಾನೆಂದು ಗೋವಿಂದರಾಜನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಆಶ್ಚರ್ಯಕರ ಸಂಗತಿ ಎಂದರೆ, ಕೊಲೆ ಮಾಡಿದ ನಂತರ ಆರೋಪಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ತೆರಳಿ, ಪತ್ನಿ‌ ಹಾಗೂ ಅತ್ತೆಯ ಕೊಲೆ‌ ಮಾಡಿ ಬಂದಿದ್ದೀನಿ ಎಂದು ಒಪ್ಪಿಕೊಂಡಿದ್ದಾನೆ. ಇದರಿಂದ ಬೆಚ್ಚಿದ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದಾಗ ಸಂಪೂರ್ಣ ವಿವರ ನೀಡಿದ್ದಾನೆ.‌

ಇಬ್ಬರು ಮಕ್ಕಳನ್ನು ಸ್ಕೂಲಿಗೆ ಬಿಟ್ಟು ಮನೆಗೆ ಬಂದ ನಂತರ ಜಗಳವಾಗಿದೆ. ನಂತರ ಸಿಟ್ಟಿನಲ್ಲಿ‌‌ ಇಬ್ಬರನ್ನು ಕೊಂದು ಹಾಕಿದ್ದೇನೆ ಎಂದು ರವಿಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ.‌ ಇನ್ನು ಗೋವಿಂದರಾಜಪುರ ಠಾಣಾ‌ ವ್ಯಾಪ್ತಿಯಲ್ಲಿ ಕೊಲೆ‌ ನಡೆದಿರುವುದರಿಂದ ಅವರು ಆರೋಪಿಯನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

ಪ್ರಸ್ತುತ ಬೇಕರಿ ನಡೆಸುತ್ತಿರುವ ರವಿಕುಮಾರ್ ಈ ಹಿಂದೆ ಎಳನೀರು ವ್ಯಾಪಾರ ಮಾಡುತ್ತಿದ್ದ. ಆ ವೇಳೆ ಆತ ಎಳನೀರು ಕೊಚ್ಚಲು ಬಳಸುತ್ತಿದ್ದ ಅದೇ ಮಚ್ಚಿನಿಂದ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...