alex Certify ಹರ್ಷ ಮನೆಗೆ ಬಿಜೆಪಿ ನಾಯಕರ ಭೇಟಿ; ಪೋಷಕರಿಗೆ ಸಾಂತ್ವನ ಹೇಳಿದ ನಳಿನ್‌ ಕುಮಾರ್ ಕಟೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರ್ಷ ಮನೆಗೆ ಬಿಜೆಪಿ ನಾಯಕರ ಭೇಟಿ; ಪೋಷಕರಿಗೆ ಸಾಂತ್ವನ ಹೇಳಿದ ನಳಿನ್‌ ಕುಮಾರ್ ಕಟೀಲ್

ಮೂರು ದಿನಗಳ ಹಿಂದೆ ಕೊಲೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ಬಿಜೆಪಿ ನಾಯಕರ ಭೇಟಿ ನೀಡಿದ್ದಾರೆ. ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಈಶ್ವರಪ್ಪ ಹಾಗೂ ವಿಜಯೇಂದ್ರ ಭೇಟಿ ನೀಡಿ ಪುತ್ರ ವಿಯೋಗದಿಂದ ನೋವಿನಲ್ಲಿರುವ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಶಿವಮೊಗ್ಗದ ಸೀಗೇಹಟ್ಟಿಯಲ್ಲಿರುವ ಹರ್ಷನ ಮನೆಗೆ ಭೇಟಿ ನೀಡಿದ ಬಿಜೆಪಿ ನಾಯಕರು, ಕುಟುಂಬದೊಂದಿಗೆ ಕುಳಿತು ಅವರಿಗೆ ಸಾಂತ್ವನ ಹೇಳಿದ್ದಾರೆ.

ದುಃಖದಲ್ಲಿರುವ ಪೋಷಕರು, ಕುಟುಂಬದವರು ಮೂರು ದಿನಗಳಿಂದ ಊಟ-ತಿಂಡಿ ಮಾಡದೇ ಅಸ್ವಸ್ಥರಾಗಿರುವ ಬಗ್ಗೆ ತಿಳಿದುಕೊಂಡ ಸಚಿವ ಈಶ್ವರಪ್ಪ, ಸಾಂತ್ವನ ಹೇಳುವುದರ ಜೊತೆಗೆ ಊಟ ಕೈಬಿಡದಂತೆ ಮನವಿ‌ ಮಾಡಿ, ಊಟ ತಿನ್ನುವಂತೆ ಬಲವಂತಪಡಿಸಿದ್ದಾರೆ‌. ಜೊತೆಗೆ ಅವರ ಆರೋಗ್ಯದ ಸ್ಥಿತಿ ವಿಚಾರಿಸಿದ ಅವರು ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...