alex Certify ಹನುಮ ಮಾಲಾಧಾರಿಗಳಿಗೆ ಅಡುಗೆ ಬಡಿಸಿದ ಮುಸ್ಲಿಮರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹನುಮ ಮಾಲಾಧಾರಿಗಳಿಗೆ ಅಡುಗೆ ಬಡಿಸಿದ ಮುಸ್ಲಿಮರು

ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲು, ಹಲಾಲ್ -ಜಟ್ಕಾ ಕಟ್ ಮೊದಲಾದ ವಿವಾದಗಳು ನಡೆಯುತ್ತಿರುವ ಮಧ್ಯೆ, ಹಿಂದೂ-ಮುಸ್ಲಿಂ ಸಾಮರಸ್ಯದ ಪ್ರಕರಣಗಳೂ ಸಹ ವರದಿಯಾಗುತ್ತಿವೆ. ರಾಮ ನವಮಿ ದಿನದಂದು ಮೆರವಣಿಗೆಯಲ್ಲಿ ಹೋಗುತ್ತಿದ್ದವರಿಗೆ ಮುಸ್ಲಿಮರು ಪಾನಕ, ಮಜ್ಜಿಗೆ ವಿತರಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿತ್ತು.

ಇದೀಗ ಕೋಮು ಸಾಮರಸ್ಯದ ಮತ್ತೊಂದು ಘಟನೆ ವರದಿಯಾಗಿದ್ದು, ಕೊಪ್ಪಳ ಜಿಲ್ಲೆ ಕಾರಟಗಿ ಹನುಮ ಮಾಲಾಧಾರಿಗಳಿಗೆ ಮುಸ್ಲಿಮರು ಹಣ್ಣು-ಹಂಪಲು ವಿತರಿಸಿದ್ದರ ಜೊತೆಗೆ ಅಡಿಗೆ ಬಡಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ 45ಕ್ಕೂ ಹೆಚ್ಚು ಮಾಲಾಧಾರಿಗಳು ಪಟ್ಟಣದ ಶ್ರೀದೇವಿ ಬೀರೇಶ್ವರಿ ಸಮುದಾಯ ಭವನದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದು, ಇವರುಗಳಿಗೆ ಮಂಗಳವಾರ ರಾತ್ರಿ ಮುಸ್ಲಿಮರು ಊಟ ಬಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...