alex Certify ಹಣ ದ್ವಿಗುಣಗೊಳಿಸುವುದಾಗಿ ವಂಚನೆ – ನಗರಸಭೆ ಜೆಡಿಎಸ್ ಸದಸ್ಯ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ದ್ವಿಗುಣಗೊಳಿಸುವುದಾಗಿ ವಂಚನೆ – ನಗರಸಭೆ ಜೆಡಿಎಸ್ ಸದಸ್ಯ ಅರೆಸ್ಟ್

ಚಿತ್ರದುರ್ಗ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ನಗರಸಭೆ ಸದಸ್ಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನಗರಸಭೆ ಸದಸ್ಯ ಚಂದ್ರಶೇಖರ್ ಹಾಗೂ ಆತನ ಪತ್ನಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಈ ನಾಲ್ವರು ಹಣ ದ್ವಿಗುಣಗೊಳಿಸುವುದಾಗಿ ಜನರನ್ನು ನಂಬಿಸಿ, ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಂಧಿತ ಚಂದ್ರಶೇಖರ್, ಜೆಡಿಎಸ್ ನ ಸದಸ್ಯರಾಗಿದ್ದು, ನಗರದ ನಾಲ್ಕನೇ ವಾರ್ಡ್ ನಿಂದ ಆಯ್ಕೆಯಾಗಿದ್ದರು. ಅಲ್ಲದೇ, ಬಂಧಿತ ವ್ಯಕ್ತಿ ಈ ಭಾಗದಲ್ಲಿ ಖೋಟಾ ನೋಟ್ ಚಂದ್ರು ಎಂದೇ ಖ್ಯಾತರಾಗಿದ್ದರು ಎನ್ನಲಾಗಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ್, ಪತ್ನಿ ದೇವಿಕಾ, ಬಾಬು,ಅರುಣ್ ಎಂಬುವವರನ್ನು ಬಂಧಿಸಲಾಗಿದೆ. ಈ ನಾಲ್ವರು ಸೇರಿಕೊಂಡು ನಾಗರಾಜ್ ಎಂಬ ವ್ಯಕ್ತಿಯಿಂದ 6.18 ಲಕ್ಷ ರೂಪಾಯಿ ಹಣ ಪಡೆದು, ಬ್ಯಾಗ್ ಒಂದನ್ನು ನೀಡಿ ಇದರಲ್ಲಿ 18 ಲಕ್ಷ ರೂಪಾಯಿ ಇದೆ ಎಂದು ಸುಳ್ಳು ಹೇಳಿ ವಂಚಿಸಿದ್ದಾರೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...