alex Certify ಸ್ಪಷ್ಟೀಕರಣದ ಹಿಂದೆಯೇ BSY ಮುಕ್ತ ಬಿಜೆಪಿ ಅಭಿಯಾನ ಜೋರಾಗಿದೆ ಎಂದ ಕಾಂಗ್ರೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪಷ್ಟೀಕರಣದ ಹಿಂದೆಯೇ BSY ಮುಕ್ತ ಬಿಜೆಪಿ ಅಭಿಯಾನ ಜೋರಾಗಿದೆ ಎಂದ ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಸ್ತಾಪವೇ ಇಲ್ಲ ಎಂದಮೇಲೆ ಮುಖ್ಯಮಂತ್ರಿ ಯಡಿಯೂರಪ್ಪನವರ ಹಾಗೂ ಬಿಜೆಪಿ ನಾಯಕರ ಸ್ಪಷ್ಟಿಕರಣ ಏಕೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಪ್ರಶ್ನಿಸಿದೆ.

ಈ ಸ್ಪಷ್ಟಿಕರಣದ ಹಿಂದೆ ಬಿಜೆಪಿಯಲ್ಲಿ ಬಿ ಎಸ್ ವೈ ಮುಕ್ತ ಬಿಜೆಪಿ ಅಭಿಯಾನ ಜೋರಾಗಿದೆ ಎಂದರ್ಥ. ಕೊರೋನಾ ಕಾಲಘಟ್ಟದಲ್ಲಿ ಬಿಜೆಪಿಗೆ ಜನಪರ ಚಿಂತನೆಗಳಿಲ್ಲದೆ, ಕುರ್ಚಿಪರ ಚಿಂತನೆಗಳು ಮಾತ್ರ ಉಳಿದಿದೆ ಎಂದು ಕಿಡಿಕಾರಿದೆ.

ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಬೆನ್ನಲ್ಲೇ ವರಿಷ್ಠರು ಸೂಚಿಸಿದ ತಕ್ಷಣ ರಾಜೀನಾಮೆ ನೀಡುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಸಿಎಂ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಈ ನಡುವೆ ಬಿಜೆಪಿ ನಾಯಕರು ಯಡಿಯೂರಪ್ಪನವರೇ ನಮ್ಮ ಸರ್ವಸಮ್ಮತ ನಾಯಕ, ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ. ನಾಯಕತ್ವ ಬದಲಾವಣೆ ಗಾಳಿ ಸುದ್ದಿ ಎಂಬ ಹೇಳಿಕೆ ನೀಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಾಂಗ್ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...