alex Certify ಸ್ನೇಹಿತನ ಪತ್ನಿ ವ್ಯಾಮೋಹಕ್ಕೆ ಬಿದ್ದವನು ಮಾಡಿದ್ದೇನು ಗೊತ್ತಾ…? ಬೆಚ್ಚಿ ಬೀಳಿಸುತ್ತೆ ಈ ಸ್ಟೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನ ಪತ್ನಿ ವ್ಯಾಮೋಹಕ್ಕೆ ಬಿದ್ದವನು ಮಾಡಿದ್ದೇನು ಗೊತ್ತಾ…? ಬೆಚ್ಚಿ ಬೀಳಿಸುತ್ತೆ ಈ ಸ್ಟೋರಿ

ಕೋಮು ಗಲಭೆಯಿಂದ ಈಗಾಗಲೇ ನಲುಗಿ ಹೋಗಿರುವ ಶಿವಮೊಗ್ಗದಲ್ಲಿ ತನ್ನ ಸ್ನೇಹಿತನ ಪತ್ನಿಯ ವ್ಯಾಮೋಹಕ್ಕೆ ಬಿದ್ದವನು ಮಾಡಿರುವ ಕೆಲಸ ಬೆಚ್ಚಿ ಬೀಳಿಸುವಂತಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಸ್ನೇಹಿತನನ್ನು ಜೈಲಿಗೆ ಕಳುಹಿಸಿದರೆ ತಾನು ಆತನ ಪತ್ನಿಯೊಂದಿಗೆ ಸುಖವಾಗಿರಬಹುದೆಂಬ ಕಾರಣಕ್ಕೆ ಸಂಚು ರೂಪಿಸಿದ್ದವನು ಇದೀಗ ತಾನೇ ಜೈಲಿಗೆ ಹೋಗುವಂತಾಗಿದೆ.

ಪ್ರಕರಣದ ವಿವರ: ಶಿವಮೊಗ್ಗದಲ್ಲಿ ಗಲಭೆ ನಡೆದ ಬಳಿಕ ಸದ್ಯ ಶಾಂತ ಪರಿಸ್ಥಿತಿ ನೆಲೆಸಿದ್ದು ಇದರ ಮಧ್ಯೆ ಆಗಸ್ಟ್ 20ರಂದು ಗಾಂಧಿ ಬಜಾರ್ ನ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಗಿಲ ಬಳಿ ಖಾಕಿ ಕವರ್ನಲ್ಲಿದ್ದ ಪತ್ರವೊಂದು ಕಂಡು ಬಂದಿತ್ತು. ಇದರಲ್ಲಿ ಕೆಲವರು ಮತ್ತೆ ಕೋಮು ಗಲಭೆ ಮತ್ತು ಕೊಲೆ ಮಾಡುವ ಕುರಿತು ಮಾತನಾಡಿಕೊಳ್ಳುತ್ತಿದ್ದು, ಇವರುಗಳ ತಂಡದಲ್ಲಿ ಆಜಾದ್ ನಗರದ ಯುವಕ ಇದ್ದ ಎಂದು ಬರೆಯಲಾಗಿತ್ತು.

ಈ ಪತ್ರ ಪೊಲೀಸರ ಕೈಗೆ ತಲುಪಿದ ವೇಳೆ ಅವರು ಆಜಾದ್ ನಗರದ ಯುವಕನನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಆತ ಯಾವುದೇ ಸಂಚು ರೂಪಿಸಿರಲಿಲ್ಲವೆಂಬ ಅಂಶ ತಿಳಿದು ಬಂದಿತ್ತು. ಸರಿ, ಆತನ ಸ್ನೇಹಿತರು ಯಾರು ಎಂಬ ಪರಿಶೀಲನೆ ನಡೆಸಿದಾಗ ಸೂಳೆಬೈಲ್ ಯುವಕ ಆತ್ಮೀಯನಾಗಿರುವುದು ಕಂಡುಬಂದಿದ್ದು ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಆಜಾದ್ ನಗರದ ಯುವಕನ ಪತ್ನಿ ಮೇಲೆ ಈತ ಕಣ್ಣಾಕಿರುವ ಸಂಗತಿ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ವೇಳೆ ಗಣಪತಿ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಜಾದ್ ನಗರದ ಯುವಕನನ್ನು ಪೊಲೀಸರು ಜೈಲಿಗೆ ಕಳುಹಿಸಿದರೆ ತಾನು ಆತನ ಪತ್ನಿಯೊಂದಿಗೆ ಇರಬಹುದೆಂಬ ಕಾರಣಕ್ಕೆ ಸೂಳೇಬೈಲ್ ಯುವಕ ಪತ್ರ ಬರೆದಿರುವುದು ಬಹಿರಂಗವಾಗಿದೆ. ಸ್ನೇಹಿತನನ್ನು ಜೈಲಿಗೆ ಕಳಿಸಲು ಹೋದವನೇ ಇದೀಗ ಜೈಲು ಪಾಲಾಗುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...