alex Certify ಸ್ನೇಹಿತನನ್ನೇ ಕಿಡ್ನಾಪ್ ಮಾಡಿಸಿದ ಗೆಳೆಯ ಇದರ ಹಿಂದಿದೆ ಇಂಥಾ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನನ್ನೇ ಕಿಡ್ನಾಪ್ ಮಾಡಿಸಿದ ಗೆಳೆಯ ಇದರ ಹಿಂದಿದೆ ಇಂಥಾ ಕಾರಣ…!

ಸ್ನೇಹಿತರು ಅಂದರೆ ಎಂತಾ ಸಂದರ್ಭದಲ್ಲು ಜೊತೆಗಿರುವವರು.‌ ಕಷ್ಟಕ್ಕೆ ಹೆಗಲು ಕೊಡುವವರು, ಸಂತೋಷದಲ್ಲಿ ಸಾಥ್ ನೀಡುವವರು. ರಕ್ತ ಸಂಬಂಧಕ್ಕು ಮೀರಿದ ಪವಿತ್ರ ಬಂಧ ಗೆಳೆತನ. ಆದರೆ ಇಲ್ಲೊಬ್ಬ ಸ್ನೇಹಿತ ತನ್ನ ಆತ್ಮೀಯ ಗೆಳೆಯನ ಏಳಿಗೆ ಸಹಿಸದೆ ಆತನನ್ನೇ ಕಿಡ್ನಾಪ್ ಮಾಡಿಸಿದ್ದಾನೆ.‌

ಹೌದು, ಇಂಟಿರಿಯರ್ ಹಾಗೂ ರಿಯಲ್‌ ಎಸ್ಟೇಟ್ ಬ್ಯುಸಿನಸ್ ನಡೆಸ್ತಿರುವ ಸೈಯ್ಯದ್ ನಯಾಜ್ ಎನ್ನುವ ವ್ಯಕ್ತಿ ಕಷ್ಟಪಟ್ಟು ಒಳ್ಳೆ ಏಳಿಗೆ ಕಾಣುತ್ತಿದ್ದಾನೆ. ಆದರೆ ಕೆಲವರಿಗೆ ಈತನ ಬೆಳವಣಿಗೆ ಕಣ್ಣು ಕೆಂಪಾಗುವಂತೆ ಮಾಡಿದೆ. ತಾನು ಅಪಹರಣವಾಗುವವರೆಗೆ ನನ್ನ ಆತ್ಮೀಯ ಸ್ನೇಹಿತ‌ ಕೂಡ ಅವರಲ್ಲಿ ಒಬ್ಬನಾಗಿರುತ್ತಾನೆ‌ ಎನ್ನುವುದು ಸೈಯ್ಯದ್ ಗೆ ತಿಳಿದಿರಲಿಲ್ಲ.

ಫೆಬ್ರವರಿ 16ರಂದು ಬಿಎಂಡಬ್ಲ್ಯು ಕಾರಿನಲ್ಲಿ ಬಂದ ನಾಲ್ವರು ಸೈಯ್ಯದ್ನನ್ನು ಕೆ.ಜಿ.ಹಳ್ಳಿಯ ರಾಮಾ ಟೆಂಪಲ್ ರೋಡ್ ಬಳಿಯಿಂದ ಅಪಹರಿಸಿದ್ದಾರೆ. ಸೈಯ್ಯದ್ ಕಣ್ಣಿಗೆ ಬಟ್ಟೆ ಕಟ್ಟಿ ಚಾಕು ತೋರಿಸಿದ್ದ ದುಷ್ಕರ್ಮಿಗಳು, ಆತನನ್ನು ಕೆ.ಆರ್. ಪುರಂ ಕಡೆ ಕರೆದೊಯ್ದಿದ್ದರು. ನಂತರ ಅದೇ ದಿನ ಸೈಯದ್ನನ್ನು ಕೆ.ಆರ್.ಪುರಂ ಬಳಿ ಬಿಟ್ಟು ಪರಾರಿಯಾಗಿದ್ದರು. ಅಷ್ಟಕ್ಕೂ ಸುಮ್ಮನಾಗದ ಅವರು, ಮಾರನೇ ದಿನ ವಾಟ್ಸಾಪ್ ಕಾಲ್ ಮಾಡಿ ಮೂರು ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದರು.

ಇದರಿಂದ ಬೆದರಿದ ಸೈಯ್ಯದ್ ಪೊಲೀಸರಿಗೆ ದೂರು ನೀಡಿದರು. ದೂರು ಸ್ವೀಕರಿಸಿದ ಕೆ.ಜಿ.ಹಳ್ಳಿ ಪೊಲೀಸರು ಶೇಖ್ ಜಬಿವುಲ್ಲಾ, ಸೈಯದ್ ಅಬ್ದುಲ್, ಶಹಬಾಜ್, ರಿಯಾಜ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರನ್ನು ವಿಚಾರಿಸಿದಾಗ ಇಡೀ ಘಟನೆಯ ಸೂತ್ರದಾರಿ ಸೈಯ್ಯದ್ ಸ್ನೇಹಿತ ಅಸ್ಲಾಂ‌ ಎಂದು ತಿಳಿದು ಬಂದಿದೆ. ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಸ್ಲಾಂಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...