ಉಡುಪಿ: ಜನರು ಬಿಜೆಪಿಗೆ ಮತ ಕೊಟ್ಟಿದ್ದು ಅಭಿವೃದ್ಧಿ ವಿಚಾರಕ್ಕೆ. ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕಾಗಿಲ್ಲ ಎಂದು ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಬಿ.ಎಲ್.ಸಂತೋಷ್, ಸಿದ್ದರಾಮಯ್ಯ ಆರ್ ಎಸ್ ಎಸ್ ನ್ನು ಬೈಯ್ಯುತ್ತಾ ಓಡಾಡುತ್ತಿದ್ದಾರೆ. ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ವಿಚಾರದಲ್ಲಿ ಬೆಂಕಿ ಬಿದ್ದಂತೆ ಆಡಿದರು. ಈಗಾಗಲೇ ಸಿದ್ದರಾಮಯ್ಯ ಕಸದ ಬುಟ್ಟಿಯಲ್ಲಿದ್ದಾರೆ. ಮುಂದೆ ಅವರು ದೊಡ್ಡ ಕಸದಬುಟ್ಟಿಗೆ ಹೋಗುತ್ತಾರೆ. ಅವರ ಎಲ್ಲಾ ಮಾತಿಗೆ ಉತ್ತರಿಸಬೇಕಿಲ್ಲ ಅವರ ಮಾತಿಗೆ ಉತ್ತರಿಸಿದರೆ ಕೊಚ್ಚೆಗೆ ಕಲ್ಲು ಹೊಡೆದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
BIG BREAKING: ಹೆಲಿಕಾಪ್ಟರ್ ದುರಂತ; ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ
ಬಿಜೆಪಿಯಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದವರು ಯಾರು? ಒಬ್ಬರಾದರೂ ಇದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ನಾಲಿಗೆಗೆ ಲಂಗು, ಲಗಾಮು ಇಲ್ಲ, ಸಂಸ್ಕಾರವೂ ಇಲ್ಲ. ಮೂರು ಇಲ್ಲದಿರುವುದರಿಂದ ಹಾದಿಬೀದಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡಿದವರಲ್ಲಿ ಶಾಮ್ ಪ್ರಸಾದ್ ಮುಖರ್ಜಿ ಹೆಸರು ಮೊದಲಿನದು ಎಂದರು.
ಶಾಂತವಾಗಿ ಮನೆಯಲ್ಲಿ ಕುಳಿತು ಶಾಮ್ ಪ್ರಸಾದ್ ಮುಖರ್ಜಿ ಯಾರೆಂದು ಒಮ್ಮೆ ಸಿದ್ದರಾಮಯ್ಯ ಯೋಚಿಸಲಿ. ಭಗವಂತ ಎಲ್ಲರಿಗೂ ಆತ್ಮಸಾಕ್ಷಿಯನ್ನು ನೀಡಿದ್ದಾನೆ. ಆದರೆ ವಿಪಕ್ಷ ನಾಯಕರಲ್ಲಿ ಕೆಲವರು ಆತ್ಮಸಾಕ್ಷಿಯನ್ನೇ ಕೊಂದು ಹಾಕುತ್ತಿದ್ದಾರೆ ಎಂದು ಗುಡುಗಿದ್ದಾರೆ.