alex Certify ಸಿದ್ದರಾಮಯ್ಯ ಓರ್ವ ಹುಚ್ಚ; RSS ತಂಟೆಗೆ ಬಂದರೆ ಹುಷಾರ್; ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಕೆ.ಎಸ್. ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದರಾಮಯ್ಯ ಓರ್ವ ಹುಚ್ಚ; RSS ತಂಟೆಗೆ ಬಂದರೆ ಹುಷಾರ್; ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯ ಓರ್ವ ಹುಚ್ಚ. ರಸ್ತೆಯಲ್ಲಿ ಹೋಗುವ ನಾಯಿಯೂ ಅವರ ಮಾತಿಗೆ ಗೌರವ ಕೊಡಲ್ಲ ಎಂದು ಬಾಯಿಗೆ ಬಂದಂತೆ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ನೀವು ಆರ್.ಎಸ್.ಎಸ್. ಚಡ್ಡಿಗೆ ಬೆಂಕಿ ಹಚ್ಚುವುದಾಗಿ ಹೇಳಿದ್ದೀರಾ…..ಸಂಘದ ತಂಟೆಗೆ ಬಂದರೆ ಹುಷಾರ್ ಎಂದು ಗುಡುಗಿದ್ದಾರೆ.

ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ……. ಲಂಕೆಯೇ ಸುಟ್ಟು ಹೋಯಿತು….. ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ … ಆ ಕೆಲಸ ನಿಮಗಿಂತ ಚನ್ನಾಗಿ ಇನ್ಯಾರು ಮಾಡಲು ಸಾಧ್ಯ …. ಆರ್.ಎಸ್.ಎಸ್ ಚಡ್ಡಿಗೆ ನೀವು ಬೆಂಕಿ ಹಚ್ಜಿ ನೋಡಿ ನಿಮ್ಮ ಬುಡವೇ ಬೂದಿಯಾಗುತ್ತದೆ. ಆರ್ ಎಸ್ ಎಸ್ ವಿಷಯಕ್ಕೆ ಬರಬೇಡಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ಸೋನಿಯಾ ಗಾಂಧಿ ಬುದ್ಧಿ ಹೇಳಿದ್ದಾಯ್ತು ಆದರೂ ಕೇಳುತ್ತಿಲ್ಲ, ರಾಹುಲ್ ಗಾಂಧಿ ಹೇಳುವ ಸ್ಥಾನದಲ್ಲಿಲ್ಲ, ಡಿ.ಕೆ.‌ ಶಿವಕುಮಾರ್ ಗೆ ಹೇಳುವ ಶಕ್ತಿಯಿಲ್ಲ, ಇನ್ನು ಖರ್ಗೆ ಪ್ರಯತ್ನ ಮಾಡಿ ಸುಮ್ಮನಾದರು. ಸಿದ್ದರಾಮಯ್ಯ ಹುಚ್ಚನಂತಾಗಿದ್ದು, ಮನಬಂದಂತೆ ಹೇಳಿಕೆಗಳನ್ನು ನೀಡುತ್ತಾ ಓಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...