alex Certify ಸಾಲ ತೀರಿಸಿದ್ದ ರೈತನಿಗೆ 40 ಲಕ್ಷ ರೂಪಾಯಿ ಬಾಕಿ ಇದೆ ಎಂದು ನೋಟಿಸ್ ಕೊಟ್ಟ ಬ್ಯಾಂಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ತೀರಿಸಿದ್ದ ರೈತನಿಗೆ 40 ಲಕ್ಷ ರೂಪಾಯಿ ಬಾಕಿ ಇದೆ ಎಂದು ನೋಟಿಸ್ ಕೊಟ್ಟ ಬ್ಯಾಂಕ್…!

ತಾನು ಈ ಹಿಂದೆ ಪಡೆದಿದ್ದ ಸಾಲವನ್ನು ರೈತರೊಬ್ಬರು ತೀರಿಸಿದ್ದರೂ ಸಹ ಅದು ಇನ್ನೂ ಬಾಕಿ ಇದೆ ಎಂದು ಬ್ಯಾಂಕ್ ನೋಟಿಸ್ ಕೊಡುವ ಮೂಲಕ ಶಾಕ್ ನೀಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣದ ವಿವರ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಸೊರಬ ರಸ್ತೆ ನಿವಾಸಿ ಸತೀಶ್ ಎಂಬ ರೈತರು, ಬಿಳಕಿ ಗ್ರಾಮದಲ್ಲಿ ಕೃಷಿ ಭೂಮಿ ಹೊಂದಿದ್ದು, 2017ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮುಖಾಂತರ ಸಾಲ ಪಡೆದಿದ್ದರು.

ಬಳಿಕ ರೈತ ಸಂಘದ ಪದಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಓ ಟಿ ಎಸ್ ಮುಖಾಂತರ 6 ಲಕ್ಷ ಸಾಲವನ್ನು 4 ಲಕ್ಷಕ್ಕೆ ತೀರ್ಮಾನ ಮಾಡಿ ಅದನ್ನು ಮರುಪಾವತಿಸಿದ್ದರಲ್ಲದೆ ಯಾವುದೇ ಸಾಲವಿಲ್ಲ ಎಂಬ ಪತ್ರವನ್ನು ಬ್ಯಾಂಕಿನಿಂದ ಪಡೆದಿದ್ದರು.

ಇದರ ಮಧ್ಯೆಯೂ ಈಗ ದಿಢೀರನೆ 40 ಲಕ್ಷ ರೂಪಾಯಿ ಸಾಲ ಹಾಗೆಯೇ ಬಾಕಿ ಉಳಿದುಕೊಂಡಿದೆ ಎಂದು ಕೆನರಾ ಬ್ಯಾಂಕಿನಿಂದ ನೋಟಿಸ್ ಬಂದಿದ್ದು, ರೈತ ಸತೀಶ್ ಆಘಾತಗೊಂಡಿದ್ದಾರೆ. ಈ ಬಗ್ಗೆ ಬ್ಯಾಂಕಿನ ಉನ್ನತ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ರೈತ ಸಂಘ ಎಚ್ಚರಿಕೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...