alex Certify ಸಚಿವ ಶಿವರಾಜ್ ತಂಗಡಗಿಗೆ ಸಮಯದ ಪಾಠ ಮಾಡಿದ ಡಾ. ಪರಮೇಶ್ವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವ ಶಿವರಾಜ್ ತಂಗಡಗಿಗೆ ಸಮಯದ ಪಾಠ ಮಾಡಿದ ಡಾ. ಪರಮೇಶ್ವರ್

ಬೆಂಗಳೂರು: ಚಾವುಂಡರಾಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಚಿವ ಶಿವರಾಜ್ ತಂಗಡಗಿಗೆ ಸಮಯದ ಪಾಠ ಮಾಡಿದ ಪ್ರಸಂಗ ನಡೆಯಿತು.

ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಶಿವರಾಜ್ ತಂಗಡಗಿಯವರಿಗೆ, ಭಾಷಣದ ವೇಳೆಯೇ ಗರಂ ಆದ ಗೃಹ ಸಚಿವರು, ಯಾಕಪ್ಪ ಇಷ್ಟೊಂದು ತಡವಾಗಿ ಬರುತ್ತೀಯಾ ? ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಬರಬೇಕು. ಇಲ್ಲದಿದ್ದರೆ ಜನರು ಸಚಿವರ ಬಗ್ಗೆ ಲಘುವಾಗಿ ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಸಚಿವರೇ ತಡವಾಗಿ ಬರುತ್ತಾರೆ ಎಂದು ಜನರೇ ಹೇಳುತ್ತಾರೆ ಎಂದರು. ಈ ವೇಳೆ ಸಚಿವ ತಂಗಡಗಿ ನಗುತ್ತಲೇ ತಲೆಯಾಡಿಸಿ ವೇದಿಕೆ ಮೇಲೆ ಕುಳಿತ ಘಟನೆ ನಡೆಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...